
ನವದೆಹಲಿ(ಸೆ.24): ಕೊರೋನಾ ಹಾವಳಿಯ ನಡುವೆಯೇ ಆರಂಭವಾಗಿದ್ದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನವು ಬುಧವಾರ ಅಂತ್ಯವಾಗಿದೆ. ತನ್ಮೂಲಕ ಉಭಯ ಸದನಗಳ ಅಧಿವೇಶನವು ನಿಗದಿತ ದಿನಕ್ಕಿಂತ 8 ದಿನಗಳ ಮುಂಚಿತವಾಗಿಯೇ ಮುಕ್ತಾಯವಾದಂತಾಗಿದೆ. ಸೆ.14ರಿಂದ ಆರಂಭವಾಗಿದ್ದ ಉಭಯ ಸದನಗಳ ಕಲಾಪವು ನಿಗದಿಯಂತೆ ಅ.1ಕ್ಕೆ ಮುಕ್ತಾಯವಾಗಬೇಕಿತ್ತು.
ಕಲಾಪದಲ್ಲಿ ಭಾಗಿಯಾಗುವ ಜನಪ್ರತಿನಿಧಿಗಳಿಗೆ ಕೊರೋನಾ ಸೋಂಕು ವ್ಯಾಪಿಸದಂತೆ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕಟ್ಟೆಚ್ಚರ ವಹಿಸಲು ಇದೇ ಮೊದಲ ಬಾರಿಗೆ ರಾಜ್ಯಸಭೆ ಮತ್ತು ಲೋಕಸಭೆಯ ಸದನವನ್ನು ಒಟ್ಟಿಗೆ ಸೇರಿಸಿ ಒಮ್ಮೆ ಲೋಕಸಭೆ ಕಲಾಪ ಮತ್ತು ಇನ್ನೊಮ್ಮೆ ರಾಜ್ಯಸಭೆ ಕಲಾಪ ನಡೆಸಲಾಗಿತ್ತು. ಆದಾಗ್ಯೂ, ಹೆಚ್ಚಿನ ಸಂಸದರಿಗೆ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ 8 ದಿನಗಳ ಮುಂಚಿತವಾಗಿಯೇ ಸಂಸತ್ತಿನ ಮುಂಗಾರು ಕಲಾಪ ಅಂತ್ಯವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರು, ‘18 ದಿನಗಳ ಕಲಾಪವನ್ನು 10 ದಿನಕ್ಕೇ ಮೊಟಕುಗೊಳಿಸಲಾಗುತ್ತಿದೆ. ಆದರೆ, ಈ 10 ದಿನಗಳ ಕಲಾಪವು ಫಲಪ್ರದವಾಗಿದ್ದು, 25 ಮಸೂದೆಗಳು ಅಂಗೀಕಾರವಾಗಿವೆ ಮತ್ತು 6 ಮಸೂದೆಗಳು ಮಂಡನೆಯಾಗಿವೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ