
ನವದೆಹಲಿ(ಆ.30): ಭಾರತವು ತನ್ನ ಸಾರ್ವಭೌಮತ್ವವ ಭದ್ರಪಡಿಸುವ ನಿಟ್ಟಿನಲ್ಲಿ ಅದೆಷ್ಟೇ ಕಠಿಣ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಭಾರತವನ್ನು ರಕ್ಷಿಸಲು, ಬಲಿಷ್ಠವಾಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ಕುರಿತು ದಿವಂಗತ ಬಲರಾಮ್ಜಿ ದಾಸ್ ಟಂಡನ್ ಸೆಮಿನಾರ್ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ಭಾರತವನ್ನು ಸಮೃದ್ಧ, ಬಲಿಷ್ಠ ಮತ್ತು ಸುಭದ್ರ ದೇಶವನ್ನಾಗಿಸುವುದು ಮಾಡುವುದು ನಮ್ಮ ಉದ್ದೇಶವಾಗಿದೆ. ಭಾರತ ಬೇರೆ ದೇಶಗಳಿಗೆ ಬೆದರಿಕೆಯೊಡ್ಡುವುದಿಲ್ಲ ಆದರೆ ಅವರಲ್ಲಿ ನಂಬಿಕೆ ಮತ್ತು ನಂಬಿಕೆಯ ಭಾವನೆ ಮೂಡಿಸುತ್ತದೆ. ಬಲಿಷ್ಠವಾದ ಭಾರತ ಅವರಿಗೆ ಅಪಾಯವಲ್ಲ ಆದರೆ ಸುರಕ್ಷತೆ ಮತ್ತು ಭದ್ರತೆಯ ಭಾವನೆ ಇರಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆಯೂ ಮಾತನಾಡಿದ ರಾಜನಾಥ್ ಸಿಂಗ್ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಚಿಂತಾಜನಕವಾಗಿದೆ. "ನೆರೆಯ ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆಯೋ ಅದು ಭದ್ರತಾ ದೃಷ್ಟಿಯಿಂದ ಹೊಸ ಸವಾಲು ಹುಟ್ಟುಹಾಕುತ್ತದೆ. ನಮ್ಮ ಸರ್ಕಾರ ದೇಶದ ಅಭಿವೃದ್ಧಿಯೆಡೆ ಗಮನ ಹರಿಸಿದೆ. ನಮ್ಮ ಸರ್ಕಾರ ಭಾರತೀಯರ ಭದ್ರತೆಯನ್ನು ಬಯಸುತ್ತದೆ ಮತ್ತು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯಿಂದ ಗಡಿಯಾಚೆಗೆ ಭಯೋತ್ಪಾದಕ ಚಟುವಟಿಕೆ ನಡೆಯದಂತೆ ಎಚ್ಚರವಹಿಸಲಿದೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುವ ವಿಚಾರಗಳ ಬಗ್ಗೆ ನಮ್ಮ ಸರ್ಕಾರವು ಎಚ್ಚರವಾಗಿರುತ್ತದೆ ಮತ್ತು ಎಲ್ಲಾ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿದೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ