ಕಾಕ್ರೋಚ್ ಜನತಾ ಪಾರ್ಟಿ ಮುಂದಿನ ನಡೆ ಏನು? ಆಗಸ್ಟ್ 5ಕ್ಕೆ ದೀಪ್ಕೆ ಮನೆಯಿಂದ ಮಹತ್ವದ ಘೋಷಣೆ

Published : Aug 02, 2026, 06:35 PM IST
cjp founder abhijeet deepke

ಸಾರಾಂಶ

ನೀಟ್ ಪಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಹೋರಾಟದ ಮೂಲಕ ಕ್ರಾಂತಿ ಮಾಡಿರುವ ಅಭಿಜಿತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ ಮುಂದಿನ ನಡೆ ಕುರಿತು ಆಗಸ್ಟ್ 5ರಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಮುಂದಿನ ಹೋರಾಟ ಏನು?

ಮುಂಬೈ (ಆ.02) ನೀಟ್ ಪರೀಕ್ಷೆ ವಿಚಾರ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ ಪಾರ್ಟಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ. ಹೋರಾಟಗಾರರ ಬೇಡಿಕೆ ಈಡೇರಿಕೆ ಕುರಿತು ಕೇಂದ್ರ ಸರ್ಕಾರ ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಗಿತ್ತು. ದೇಶದಲ್ಲೇ ಭಾರಿ ಸಂಚಲನ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಮುಂದಿನ ನಡೆ ಏನು? ಈ ಕುರಿತು ಚರ್ಚಿಸಲು ಕಾಕ್ರೋಚ್ ಜನತಾ ಪಾರ್ಟಿ ಪ್ರಮುಖರು ಆಗಸ್ಟ್ 5 ರಂದು ಸಭೆ ನಡೆಸುತ್ತಿದ್ದಾರೆ.

ಛತ್ರಪತಿ ಸಂಭಾಜಿ ನಗರದಿಂದ ಮಹತ್ವದ ಘೋಷಣೆ

ಆಗಸ್ಟ್ 5ರಂದು ಕಾಕ್ರೋಚ್ ಜನತಾ ಪಾರ್ಟಿ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಈ ಸಭೆಯ ಮಹಾರಾಷ್ಟ್ರೀಯ ಛತ್ರಪತಿ ಸಂಭಾಜಿನಗರದಲ್ಲಿರುವ ಸಿಜಪಿ ಪ್ರಮುಖ ಅಭಿಜಿತ್ ದೀಪ್ಕೆ ಮನೆಯಲ್ಲಿ ನಡೆಯಲಿದೆ. ಗೌರವ್ ದಾಸ್ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಭೆಯಲ್ಲಿ ಮುಂದಿನ ಹೋರಾಟ, ಪ್ರತಿಭಟನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯಾಗಲಿದೆ.

ಅಭಿಜಿತ್ ದೀಪ್ಕೆ ಮನೆಯಿಂದ ಮಹತ್ವದ ಘೋಷಣೆ

ನೀಟ್ ಹೋರಾಟದ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ಸದಸ್ಯರು, ವಿದ್ಯಾರ್ಥಿಗಳು ಸೇರಿದಂತೆ ಹೋರಾಟಗಾರರು ತಮ್ಮ ಕುಟುಂಬ ಹಾಗೂ ವೈಯುಕ್ತಿಕ ಕೆಲಸ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಕಾಕ್ರೋಚ್ ಜನತಾ ಪಾರ್ಟಿ ಪ್ರಮುಖರು ಆಗಸ್ಟ್ 5 ರಂದು ಸಭೆ ಸೇರುತ್ತಿದ್ದಾರೆ. ಸಭೆ ಬಳಿಕ ಅಭಿಜಿತ್ ದೀಪ್ಕೆ ಮನೆಯಿಂದ ಸುದ್ದಿಗೋಷ್ಠಿ ಮೂಲಕ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನಾಕಾರರಿಂದ ಪ್ರತಿಕ್ರಿಯೆ ಕೇಳಲಾಗಿದೆ. ನೀಟ್ ಹೋರಾಟ, ವಿದ್ಯಾರ್ಥಿಗಳ ಮೇಲಿನ ಕೇಸ್, ನೀಟ್ ಹೋರಾಟ ಮುಂದುವರಿಸುವ ಕುರಿತು ಹಾಗೂ ಇತರ ಕೆಲ ವಿಚಾರಗಳನ್ನು ಮುಂದಿಟ್ಟು ಹೊಸ ಹೋರಾಟ ಆರಂಭಿಸುವ ಕುರಿತು ಚರ್ಚೆಗಳು ನಡೆಯಲಿದೆ.

ಕೇಂದ್ರ ಸರ್ಕಾರದ ವಿರುದ್ಧ ಹೊಸ ಅಸ್ತ್ರ ಪ್ರಯೋಗ

ನೀಟ್ ಹೋರಾಟದ ಮೂಲಕ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿ ಇದೀಗ ಹೊಸ ವಿಷಯ ಮಂದಿಟ್ಟು ಕೇಂದ್ರದ ವಿರುದ್ದ ಹೋರಾಟ ನಡೆಸುವ ಕುರಿತು ಹಲವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ವಿಚಾರಗಳು ಆಗಸ್ಟ್ 5ರ ಚರ್ಚೆಯಲ್ಲಿ ಬರಲಿದೆ. ಬಳಿಕ ಅಂತಿಮ ಘೋಷಣೆ ನಡೆಯಲಿದೆ.

ಇತ್ತ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯಲು ಅಭಿಜಿತ್ ದೀಪ್ಕೆ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಮಾಡಿ ಕ್ಷಮಿಸಿದ್ದೇನೆ ಎಂದರೆ ಸಾಲದು. ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ಮೋದಿ ಮತ್ತೊಂದು ವಿಡಿಯೋ ಮಾಡಿ ಪೊಲೀಸರಿಗೆ ಪ್ರಕರಣಗಳನ್ನು ಹಿಂಪಡೆಯಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರ ಲಾಠಿ ಚಾರ್ಚ್ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿಗೆ ಕೆಟ್ಟದ್ದಾಗಿ ಬೈದಾಕೆ ಯುವತಿ, ಕ್ಷಮೆ ಕೋರಿದಾಕೆ ಬಾಲಕಿ? ಕೇಸ್​ನಿಂದ ತಪ್ಪಿಸಿಕೊಳ್ಳುವ ತಂತ್ರನಾ? ಏನಿದು ವಿವಾದ
'ನನ್ನ ಮಗಳಿಗೆ ಮರುಜೀವ ಕೊಟ್ಟಿದ್ದು ಮೋದೀಜಿ'; ಕ್ಷಮೆ ಕೇಳಿದ ಬಾಲಕಿ, ದತ್ತು ಪಡೆಯುವಂತೆ ತಾಯಿಯ ಕಣ್ಣೀರು