ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ!

Published : Feb 09, 2020, 10:14 AM IST
ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ!

ಸಾರಾಂಶ

ಭಗವದ್ಗೀತೆ ಬಗ್ಗೆ ಹರೇ ಕೃಷ್ಣ ಮಿಷನ್‌ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನ ಆಯೋಜಿಸಿದ್ದ ಕ್ವಿಝ್‌ ಸ್ಪರ್ಧೆ| ಭಗವದ್ಗೀತೆ ಕ್ವಿಝ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ 

ಜೈಪುರ[ಫೆ.09]: ಭಗವದ್ಗೀತೆ ಬಗ್ಗೆ ಹರೇ ಕೃಷ್ಣ ಮಿಷನ್‌ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನ ಆಯೋಜಿಸಿದ್ದ ಕ್ವಿಝ್‌ ಸ್ಪರ್ಧೆಯಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ಪ್ರಥಮ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾನೆ. ಒಟ್ಟು 5000 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಬ್ದುಲ್‌ ಕಗ್ಝಿ (16) ಮೊದಲ ಸ್ಥಾನ ಪಡೆದಿದ್ದಾನೆ.

ಸಂಸ್ಕೃತ ಶ್ಲೋಕ ಹಾಗೂ ಅಧ್ಯಾಯಗಳ ಬಗ್ಗೆ ಅಬ್ದುಲ್‌ಗಿದ್ದ ಜ್ಞಾನ ನೋಡಿ ತೀರ್ಪುಗಾರರೇ ಅಚ್ಚರಿಗೊಂಡಿದ್ದಾರೆ. ಬಾಲ್ಯದಿಂದ ‘ಲಿಟಲ್‌ ಕೃಷ್ಣ’ ಕಾರ್ಟೂನು ಚಿತ್ರಗಳನ್ನು ನೋಡಿ, ಕೃಷ್ಣನಿಂದಲೇ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದೆಂದು ಅಬ್ದುಲ್‌ ನಂಬಿದ್ದ. ಬಳಿಕ ಮಥುರಾ ನಾತ್‌ ಬರೆದಿರುವ ಶ್ರೀ ಕೃಷ್ಣ ಕುರಿತ ಪುಸ್ತಕವನ್ನೂ ಓದಿದ್ದ. ಶುಕ್ರವಾರ ಪ್ರಶಸ್ತಿ ಸ್ವೀಕಾರಕ್ಕೆ ಹರೇ ಕೃಷ್ಣ ದೇಗುಲಕ್ಕೆ ಬಂದಾಗಲೂ ರಾಸ್‌ ಖಾನ್‌ ಬರೆದ ಶ್ಲೋಕಗಳನ್ನು ಹೇಳುತ್ತಿದ್ದ.

ತಂದೆ ಈ ಹಿಂದೆ ಕುರಾನ್‌ ಸ್ಪರ್ಧೆಯಲ್ಲೂ ಬಹುಮಾನ ಪಡೆದಿದ್ದ ಎಂದು ಹರೇ ಕೃಷ್ಣ ಕಲಾ ಶಿಕ್ಷಣ ಮುಖ್ಯಸ್ಥ ಸ್ವಾಮಿ ಸಿದ್ದ ಸ್ವರೂಪ ದಾಸ್‌ ಹೇಳಿದ್ದಾರೆ.

ಜೈಪುರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದು, ನನ್ನ ನಂಬಿಕೆ ಹಾಗೂ ಆಚರಣೆಗಳಿಗೆ ಅವರು ಯಾವತ್ತೂ ಅಡ್ಡು ಪಡಿಸಿಲ್ಲ. ಹೆಚ್ಚಿನ ಆಧ್ಯಾತ್ಮಿಕ ವಿಚಾರಗಳನ್ನು ಮೊಬೈಲ್‌ ಮೂಲಕ ತಿಳಿದುಕೊಳ್ಳುತ್ತೇನೆ ಎಂದು ಅಬ್ದುಲ್‌ ಹೇಳಿದ್ದಾನೆ.

ಒಟ್ಟು 2 ಹಂತಗಳಲ್ಲಿ ಕ್ವಿಝ್‌ ನಡೆಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ನಡೆದ ಮೊದಲ ಹಂತದಲ್ಲಿ 50 ಶಾಲೆಯ ಮಕ್ಕಳು ಹಾಜರಾಗಿದ್ದರು. ಅವರಲ್ಲಿ 60 ಮಂದಿಯನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!