
ನವದೆಹಲಿ(ಏ.25): ಕೇರಳದ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಅವರು ಎಎಪಿ ಶಾಸಕ ಅತಿಶಿ ಅವರ ಸುಳ್ಳನ್ನು ಬಟಾಬಯಲು ಮಾಡಿದ್ದಾರೆ. ವಿ.ಶಿವನಕುಟ್ಟಿ ಈ ಬಗ್ಗೆ ಟ್ವೀಟ್ ಮಾಡಿ, ದೆಹಲಿ ಮಾದರಿ ಅಧ್ಯಯನಕ್ಕೆ ಕೇರಳದ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆಂಬ ಮಾಹಿತಿ ಸುಳ್ಳು ಎಂದಿದ್ದಾರೆ. ಕೇರಳದಿಂದ ಯಾರನ್ನೂ ಕಳುಹಿಸಿಲ್ಲ ಎಂದು ಸ್ಷ್ಟಪಡಿಸಿದ್ದಾರೆ.
ಹೌದು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಎಲ್ಲಾ ರಾಜ್ಯಗಳಲ್ಲಿ ಪ್ರವಾಸ ಮಾಡಿ 'ದೆಹಲಿ ಮಾದರಿ' ಮೂಲಕ ರಾಜ್ಯ ಸರ್ಕಾರಗಳನ್ನು ಟಾರ್ಗೆಟ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಎಪಿ ಶಾಸಕ ಅತಿಶಿ ಮರ್ಲೆನಾ ಮಾಡಿರುವ ಟ್ವೀಟ್ ಕೇರಳದಲ್ಲಿ ಸಂಚಲನ ಮೂಡಿಸುತ್ತಿದೆ. ಈ ವಿಷಯವು ದೆಹಲಿ ಮಾದರಿಗೆ ಸಂಬಂಧಿಸಿದೆ. ಕೇರಳದ ಅಧಿಕಾರಿಗಳು ದೆಹಲಿ ಮಾದರಿಯನ್ನು ದೆಹಲಿಯ ಶಾಲೆಗಳಲ್ಲಿ ಕಲಿತಿದ್ದಾರೆ ಎಂದು ಅತಿಶಿ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಶಿಕ್ಷಣ ಸಚಿವರು, ನಾವು ಯಾರನ್ನೂ ಕಳುಹಿಸಿಯೇ ಇಲ್ಲವೆಂದರೆ, ನೀವು ಯಾವ ಅಧಿಕಾರಿಗಳನ್ನು ಸ್ವಾಗತಿಸಿದ್ದೀರಿ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಅತಿಶಿ ಹೇಳಿದ್ದೇನು?
ವಾಸ್ತವವಾಗಿ, ಈ ಹಿಂದೆ ಅತಿಶಿ ಟ್ವೀಟ್ ಮಾಡುವಾಗ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ಕೆಲವರು ದೆಹಲಿಯ ಶಾಲೆಗಳಿಗೆ ಬೇಟಿ ನೀಡಿದ ದೃಶ್ಯಗಳಿದ್ದವು. ಈ ಬಗ್ಗೆ ಬರೆದಿದ್ದ ಅವರು ದೆಹಲಿಯ ಕಲ್ಕಾಜಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಕೇರಳದ ಅಧಿಕಾರಿಗಳಿಗೆ ಆತಿಥ್ಯ ನೀಡಿರುವುದು ಅದ್ಭುತವಾಗಿದೆ. ಅವರು ನಮ್ಮ ಶಿಕ್ಷಣ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಇದನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರಲು ಉತ್ಸುಕರಾಗಿದ್ದರು. ಇದು ಅರವಿಂದ್ ಕೇಜ್ರಿವಾಲ್ ಅವರ ರಾಷ್ಟ್ರ ನಿರ್ಮಾಣದ ಕಲ್ಪನ' ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ