ವಿದೇಶಕ್ಕೆ ಲಸಿಕೆ ರಫ್ತಿಗೆ ಕಾರಣ ಕೊಟ್ಟ ಬಿಜೆಪಿ!

Published : May 13, 2021, 08:40 AM ISTUpdated : Jan 18, 2022, 04:04 PM IST
ವಿದೇಶಕ್ಕೆ ಲಸಿಕೆ ರಫ್ತಿಗೆ ಕಾರಣ ಕೊಟ್ಟ ಬಿಜೆಪಿ!

ಸಾರಾಂಶ

* ವಿದೇಶಕ್ಕೆ ಲಸಿಕೆ ರಫ್ತಿಗೆ ಕಾರಣ ಕೊಟ್ಟ ಬಿಜೆಪಿ * ಕಂಪನಿಗಳ ವಾಣಿಜ್ಯ, ಪರವಾನಗಿ ಭಾಗವಾಗಿ ಲಸಿಕೆಗಳ ರಫ್ತು * ಭಾರತದ ಸುರಕ್ಷತೆಗಾಗಿ ನೆರೆಯ 7 ದೇಶಗಳಿಗೆ ಲಸಿಕೆ ಪೂರೈಕೆ * ರಾಹುಲ್‌, ಕೇಜ್ರಿವಾಲ್‌ಗೆ ಬಿಜೆಪಿಯ ಸಂಬಿತ್‌ ಪಾತ್ರಾ ತಿರುಗೇಟು

ನವದೆಹಲಿ(ಮೇ13): ದೇಶದಲ್ಲೇ ಕೊರೋನಾ ಲಸಿಕೆಯ ಅಭಾವವಿರುವಾಗ ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ ಭಾರತದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇರಿ ಇನ್ನಿತರ ವಿಪಕ್ಷಗಳು ಟೀಕಾಸ್ತ್ರ ನಡೆಸುತ್ತಿರುವ ನಡುವೆಯೇ, ವಿದೇಶಗಳಿಗೆ ರಫ್ತು ಮಾಡಲಾದ ಶೇ.85ರಷ್ಟುಲಸಿಕೆಯ ಡೋಸ್‌ಗಳು ಭಾರತದಲ್ಲಿ ಲಸಿಕೆ ಉತ್ಪಾದಿಸುತ್ತಿರುವ 2 ಕಂಪನಿಗಳ ವಾಣಿಜ್ಯ ಮತ್ತು ಪರವಾನಗಿ ಬಾಧ್ಯತೆಗಳ ಭಾಗವಾಗಿದೆ ಎಂದು ವಿಪಕ್ಷಗಳ ಟೀಕೆಗೆ ಬಿಜೆಪಿ ತಿರುಗೇಟು ನೀಡಿದೆ.

ಈ ಸಂಬಂಧ ಬುಧವಾರ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ಭಾರತವು ವಿವಿಧ ರಾಷ್ಟ್ರಗಳಿಗೆ ಒಟ್ಟಾರೆ 1.07 ಕೋಟಿ ಡೋಸ್‌ಗಳನ್ನು ನೆರವಿನ ರೂಪದಲ್ಲಿ ರಫ್ತು ಮಾಡಿದೆ. ಇದರಲ್ಲಿ 78.5 ಲಕ್ಷ ಡೋಸ್‌ಗಳು ನೆರೆಯ 7 ರಾಷ್ಟ್ರಗಳಿಗೆ ಪೂರೈಸಲಾಗಿದೆ. ಭಾರತದ ಸುರಕ್ಷತೆ ನಿಟ್ಟಿನಲ್ಲಿ ನೆರೆಯ ರಾಷ್ಟ್ರಗಳು ಸುರಕ್ಷಿತವಾಗಿರುವುದು ಉತ್ತಮ’ ಎಂದು ರಾಹುಲ್‌ ಗಾಂಧಿ ಮತ್ತು ಆಪ್‌ ವಿರುದ್ಧ ವಾಗ್ದಾಳಿ ನಡೆಸಿದರು. ಉಳಿದಂತೆ 5.5 ಕೋಟಿ ಡೋಸ್‌ಗಳನ್ನು ಎರಡು ಲಸಿಕೆ ಉತ್ಪಾದನಾ ಕಂಪನಿಗಳ ಬಾಧ್ಯತೆಯ ಭಾಗವಾಗಿ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇದು ಅವುಗಳ ವಾಣಿಜ್ಯ ಮತ್ತು ಪರವಾನಗಿ ಬಾಧ್ಯತೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.

"

ಸೀರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸುತ್ತಿರುವ ಕೋವಿಶೀಲ್ಡ್‌ನ ಪೇಟೆಂಟ್‌ ಆಸ್ಟ್ರಾಜನೆಕಾ ಬಳಿ ಇದೆ. ಹೀಗಾಗಿ ತಾನು ಉತ್ಪಾದಿಸಿದ್ದರಲ್ಲಿ ಸೀರಂ ಒಂದಿಷ್ಟುಭಾಗ ರಫ್ತು ಮಾಡಲೇ ಬೇಕು. ಇನ್ನು ಭಾರತ್‌ ಬಯೋಟೆಕ್‌ ಲಸಿಕೆ ಉತ್ಪಾದನೆಗೆ ಅಗತ್ಯ ಕಚ್ಚಾ ವಸ್ತು ಆಮದಿಗೆ ಮಾಡಿಕೊಂಡ ಒಪ್ಪಂದದಂತೆ ಒಂದಿಷ್ಟು ಭಾಗ ರಫ್ತು ಮಾಡಿದೆ ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ