ಚಳವಳಿ ಬೆಂಬಲಿಸದ 7 ಗ್ರಾಮಸ್ಥರ ಹತ್ಯೆಗೈದ ಹೋರಾಟಗಾರರು!

Published : Jan 23, 2020, 02:53 PM ISTUpdated : Jan 23, 2020, 03:00 PM IST
ಚಳವಳಿ ಬೆಂಬಲಿಸದ 7 ಗ್ರಾಮಸ್ಥರ ಹತ್ಯೆಗೈದ ಹೋರಾಟಗಾರರು!

ಸಾರಾಂಶ

ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ‘ಪಾತಾಳಗಡಿ’ ಚಳುವಳಿ| ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು ಅಪಹರಿಸಿ ಕೊಂದು ಹಾಕಿದ ಹೋರಾಟಗಾರರು| ಮೂವರು ಹೋರಾಟಗಾರರ ಬಂಧನ

ರಾಂಚಿ[ಜ.23]: ರಾಂಚಿ: ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ಜಾರ್ಖಂಡ್‌ ಬುಡಕಟ್ಟು ಜನಾಂಗ ನಡೆಸುತ್ತಿರುವ ‘ಪಾತಾಳಗಡಿ’ ಚಳುವಳಿಗೆ ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು, ಚಳುವಳಿಯ ಹೋರಾಟಗಾರರು ಅಪಹರಿಸಿ ಹತ್ಯೆಗೈದ ಘಟನೆ ಪಶ್ಚಿಮ ಸಿಂಘೂಮ್‌ ಜಿಲ್ಲೆಯ ಬುರುಗುಲಿಕೇರಾ ಎಂಬ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಜಾರ್ಖಂಡ್‌ನಲ್ಲಿ ಸೋರೆನ್ ಸರ್ಕಾರ: ಪ್ರತಿಪಕ್ಷಗಳ ಬಲ ಪ್ರದರ್ಶನದ ಮಧ್ಯೆ ಅಧಿಕಾರ!

ಚಳವಳಿ ಕುರಿತು ನಡೆದ ಸಭೆ ವೇಳೆ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವೇಳೆ ಹೋರಾಟಗಾರರ ಗುಂಪು, ವಿರೋಧ ಮಾಡಿದ 7 ಜನರನ್ನು ಅಪಹರಿಸಿ, ಲಾಠಿಗಳಿಂದ ಬಡಿದು ಹತ್ಯೆ ಮಾಡಿದೆ. ಗ್ರಾಮಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಪಾತಾಳಗಡಿ ಎಂದು ಹೆಸರಿಡಲಾಗಿದೆ.

ಮೂವರು ಅರೆಸ್ಟ್

ಸದ್ಯ 7 ಮಂದಿ ಗ್ರಾಮಸ್ಥರಬನ್ನು ಅಪಹರಿಸಿ, ಕೊಲೆಗೈದ ಆರೋಪದಡಿಯಲ್ಲಿ ಮೂವರು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದೆ ಈ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಷ್ಟೇ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ