ಶೇ.61 ಜನರಿಗೆ ಕೋವಿಡ್‌ ಲಸಿಕೆ ಬಗ್ಗೆಯೇ ಅನುಮಾನ!

Published : Oct 25, 2020, 07:46 AM IST
ಶೇ.61 ಜನರಿಗೆ ಕೋವಿಡ್‌ ಲಸಿಕೆ ಬಗ್ಗೆಯೇ ಅನುಮಾನ!

ಸಾರಾಂಶ

ಶೇ.61 ಜನರಿಗೆ ಕೋವಿಡ್‌ ಲಸಿಕೆ ಬಗ್ಗೆಯೇ ಅನುಮಾನ| 2021ಕ್ಕೆ ಲಸಿಕೆ ದೊರೆತರೂ ಅದನ್ನು ಪಡೆಯಲ್ಲ| ‘ಲೋಕಲ್‌ ಸರ್ಕಲ್‌’ ಸಮೀಕ್ಷೆಯಲ್ಲಿ ಅಭಿಪ್ರಾಯ

ನವದೆಹಲಿ(ಅ.25): 2021ರ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇರುವ ಕೊರೊನಾ ಲಸಿಕೆಯ ಬಗ್ಗೆ ಶೇ.61 ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಲಸಿಕೆಯನ್ನು ತೆಗೆದುಕೊಳ್ಳುವ ಬದಲು ಕಾಯಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

‘ಲೋಕಲ್‌ ಸರ್ಕಲ್ಸ್‌’ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ‘ಮುಂದಿನ ವರ್ಷ ಕೊರೋನಾ ಲಸಿಕೆ ಲಭಿಸಿದರೆ ನೀವು ಅದನ್ನು ತೆಗೆದುಕೊಳ್ಳುತ್ತೀರಾ? ಈ ಮೂಲಕ ಕೋವಿಡ್‌ ಪೂರ್ವ ಜೀವನ ಶೈಲಿಗೆ ಮರಳಲು ಇಚ್ಛಿಸುತ್ತೀರಾ?’ ಎಂದು ಪ್ರಶ್ನಿಸಲಾಗಿತ್ತು.

ಈ ಪ್ರಶ್ನೆಗೆ 225 ಜಿಲ್ಲೆಗಳ 8312 ಜನರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗಿದೆ. ಇವರಲ್ಲಿ ಶೇ.61ರಷ್ಟುಜನರು, ‘2021ರಲ್ಲಿ ಕೊರೋನಾ ಲಸಿಕೆ ಲಭ್ಯವಾದರೂ ತಕ್ಷಣವೇ ಅದನ್ನು ಪಡೆಯಲು ನಮಗೆ ಇಷ್ಟವಿಲ್ಲ. ಏಕೆಂದರೆ ಲಸಿಕೆ ಬಗ್ಗೆ ನಮಗೆ ಅನುಮಾನಗಳಿವೆ’ ಎಂದು ಉತ್ತರಿಸಿದ್ದಾರೆ.

ಕೇವಲ ಶೇ.12 ಜನರು ಮಾತ್ರ, ‘ನಾನು ಲಸಿಕೆ ಪಡೆದು ಕೋವಿಡ್‌ಪೂರ್ವ ಜೀವನ ಶೈಲಿಗೆ ಮರಳುವೆ’ ಎಂದು ಉತ್ತರಿಸಿದ್ದರೆ, ಶೇ.25 ಜನರು ‘ನಾನು ಲಸಿಕೆ ಹಾಕಿಸಿಕೊಂಡರೂ ಕೋವಿಡ್‌ಪೂರ್ವ ಜೀವನಶೈಲಿಗೆ ಮರಳಲು ಆಗದು’ ಎಂದಿದ್ದಾರೆ.

ಲಾಕ್‌ಡೌನ್‌ನಲ್ಲಿ ಚಿಂತೆಯ ಸ್ಥಿತಿ:

‘ಕೊರೋನಾ ಬಂದು ಈಗ 8 ತಿಂಗಳಾಗಿದ್ದು, ಲಾಕ್‌ಡೌನ್‌ ವೇಳೆಯ ಮನಸ್ಥಿತಿ ಹೇಗಿತ್ತು’ ಎಂಬ ಪ್ರಶ್ನೆಗೆ ಬಹುಪಾಲು ಜನರು ‘ಚಿಂತೆ’ಯ ಭಾವನೆ ವ್ಯಕ್ತಪಡಿಸಿದ್ದಾರೆ.

ಶೇ.33 ಜನರು ‘ನನಗೆ ಚಿಂತೆ ಆಗಿದೆ’ ಎಂದಿದ್ದರೆ, ಶೇ.19 ಜನರು ‘ಸಂತೋಷದಿಂದ ಇದ್ದೆ ಹಾಗೂ ನಿರಾಳನಾಗಿದ್ದೆ’ ಎಂದಿದ್ದಾರೆ. ಶೇ.13 ಜನರು ‘ಖಿನ್ನತೆ’, ಶೇ.5 ಜನರು ‘ಉತ್ಸಾಹ’ ಹಾಗೂ ಶೇ.20 ಜನರು ‘ಧನ್ಯತಾಭಾವ’ ವ್ಯಕ್ತಪಡಿಸಿದ್ದಾರೆ. ಶೇ.10 ಜನರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಕೊರೋನಾ ನಿರ್ಬಂಧಗಳಿಗೆ ಸಹಮತ:

ಶೇ.38ರಷ್ಟುಜನರು ಕೊರೋನಾ ನಂತರದ ಯುಗದ ‘ನಿರ್ಬಂಧಿತ ಜೀವನಶೈಲಿ’ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಶೇ.23 ಜನರು ‘ನಿರ್ಬಂಧಗಳಿಂದ ಸಾಕಾಗಿದೆ’ ಎಂದಿದ್ದರೆ, ಶೇ.14 ಜನರು ‘ಡಿ.31ವರೆಗೆ ಕಾಯುತ್ತೇವೆ’ ಎಂದು, ಶೇ.6 ಜನರು ‘ಮಾ.31ರವರೆಗೆ ಕಾಯುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?