ಮೋದಿ 3.0 ಪ್ರಮಾಣ ವಚನಕ್ಕೆ 3 ಸ್ತರದ ಭದ್ರತೆ: ಹೇಗಿರಲಿದೆ ಬಿಗಿ ಬಂದೋಬಸ್ತ್‌!

Published : Jun 09, 2024, 01:50 PM IST
ಮೋದಿ 3.0 ಪ್ರಮಾಣ ವಚನಕ್ಕೆ 3 ಸ್ತರದ ಭದ್ರತೆ: ಹೇಗಿರಲಿದೆ ಬಿಗಿ ಬಂದೋಬಸ್ತ್‌!

ಸಾರಾಂಶ

ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹಾಗೂ ವಿದೇಶಿ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಲಿದ್ದಾರೆ. 

ನವದೆಹಲಿ (ಜೂ.09): ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹಾಗೂ ವಿದೇಶಿ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಲಿದ್ದಾರೆ. ಆದ್ದರಿಂದ ಪ್ರಮಾಣವಚನ ನಡೆಯುವ ರಾಷ್ಟ್ರಪತಿ ಭವನ ಹಾಗೂ ಗಣ್ಯರು ಇರುವ ರೈಸೀನಾ ಹಿಲ್ಸ್‌ ಸುತ್ತಮುತ್ತ 3 ಸ್ತರದ ಭದ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸಾರ್ಕ್ ಸದಸ್ಯ ರಾಷ್ಟ್ರಗಳ ಗಣ್ಯರು ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್‌, ಭೂತಾನ್‌, ನೇಪಾಳ, ಮಾರಿಷಸ್‌ ಮತ್ತು ಸೀಶೆಲ್ಸ್‌ನ ಗಣ್ಯರು ಭಾಗಿಯಾಗಲಿದ್ದಾರೆ. ಗಣ್ಯರು ತಂಗಲಿರುವ ಲೀಲಾ, ತಾಜ್‌, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‌ಗಳಲ್ಲಿ ಪೊಲೀಸರು ತಮ್ಮ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಹೇಗಿರಲಿದೆ ಭದ್ರತೆ?: ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ 5 ಕಂಪೆನಿಗಳ ಅರೆಸೇನಾ ಪಡೆ, ಎನ್‌ಎಸ್‌ಜಿ ಕಮಾಂಡೋಸ್‌, ಡ್ರೋನ್‌ , ಸ್ನೈಪರ್ಸ್ ಸೇರಿದಂತೆ ಬಹು ಹಂತದ ಭದ್ರತೆ ಇರಲಿದೆ. ಪ್ರಮಾಣ ವಚನ ನಡೆಯಲಿರುವ ಸ್ಥಳದ ಒಳಗಡೆ ಮತ್ತು ಹೊರಗಡೆ ಒಟ್ಟು 3 ಹಂತದಲ್ಲಿ ಸಿಬ್ಬಂದಿಗಳ ಕಣ್ಗಾವಲಿರಲಿದೆ. ಪೊಲೀಸ್ ಮೂಲಗಳ ಪ್ರಕಾರ ಪ್ರಮಾಣ ವಚನಕ್ಕೆ ಆಗಮಿಸಲಿರುವ ಗಣ್ಯರಿಗೆ ಅವರು ತಂಗಿರುವ ಹೋಟೆಲ್‌ನಿಂದ ರಾಷ್ಟ್ರಪತಿ ಭವನಕ್ಕೆ ಹೋಗಲು ಮತ್ತು ಮರಳಲು ಮಾರ್ಗಗಳನ್ನು ಗೊತ್ತು ಪಡಿಸಲಾಗಿದೆ. ದೆಹಲಿ ಪೊಲೀಸರು ರಾಷ್ಟ್ರಪತಿ ಭವನದ ಹೊರಗಡೆ ಭದ್ರತೆಯಲ್ಲಿ ಭಾಗಿಯಾಗಲಿದ್ದಾರೆ. ಅರೆಸೇನಾ ಪಡೆಯ ಸಿಬ್ಬಂದಿಗಳು ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ.

ಅರೆಸೇನಾ ಪಡೆ, ದೆಹಲಿ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ಒಟ್ಟು 2,500 ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸ್ನೈಪರ್ಸ್‌ ಮತ್ತು ಅರೆಸೇನಾ ಪಡೆಗಳು ಗಣ್ಯರು ಸಂಚರಿಸುವ ಮಾರ್ಗದಲ್ಲಿ ಭದ್ರತೆಯನ್ನು ಒದಗಿಸಲಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು ಇರಲಿದೆ. ಪ್ರಮಾಣ ವಚನದ ಭದ್ರತೆ ಜಿ.20 ಶೃಂಗ ಸಭೆಯ ಭದ್ರತೆ ರೀತಿ ಇರಲಿದೆ.  ಭದ್ರತಾ ದೃಷ್ಟಿಯಿಂದ ಹಾಗೂ ಸಂಚಾರ ದಟ್ಟಣೆ ಉಂಟಾಗಬಹುದು ಎನ್ನುವ ಕಾರಣಕ್ಕೆ ದೆಹಲಿಯ ಮಧ್ಯ ಭಾಗಕ್ಕೆ ಹೋಗುವ ರಸ್ತೆಗಳು ಭಾನುವಾರ ಬಂದ್ ಆಗಲಿವೆ. ಶನಿವಾರದಿಂದಲೇ ದೆಹಲಿಯ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ನಿಗಮಗಳಿಂದ ಪ್ರಸ್ತಾವನೆ ಬಂದರೆ ಬಸ್‌ ಟಿಕೆಟ್‌ ದರ ಏರಿಕೆ ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ

ಹಾರಾಟ ನಿಷೇಧಿತ ವಲಯ: ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರ ರಾಜಧಾನಿಯನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಲಾಗಿದೆ. ಅದರ ಪ್ರಕಾರ ಡ್ರೋನ್ , ಪಾರಾ ಗ್ಲೈಡರ್ಸ್‌ ,ರಿಮೋಟ್‌ ಪೈಲೆಟ್‌ ಏರ್‌ಕ್ರಾಫ್ಟ್‌, ಮತ್ತು ಹಾಟ್‌ ಏರ್‌ ಬಲೂನ್‌ಗಳ ಹಾರಾಟವನ್ನು ಮುಂದಿನ 2 ದಿನಗಳ ಕಾಲ ನಿರ್ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್