ಕಾರನ್ನು ಕಸಿದುಕೊಂಡ ನಾಯಕ, ಗೆಳೆಯರಿಂದ ಥಳಿತ, ಸೂಸೈಡ್‌ ಮಾಡ್ಕೊಂಡ ವಕೀಲ!

Published : Jul 11, 2022, 10:06 AM ISTUpdated : Jul 11, 2022, 10:21 AM IST
ಕಾರನ್ನು ಕಸಿದುಕೊಂಡ ನಾಯಕ, ಗೆಳೆಯರಿಂದ ಥಳಿತ, ಸೂಸೈಡ್‌ ಮಾಡ್ಕೊಂಡ ವಕೀಲ!

ಸಾರಾಂಶ

* ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಯ್ತು ಆತ್ಮಹತ್ಯೆ ಪ್ರಕರಣ * ಮಾನಸಿಕ ಖಿನ್ನತೆ ತಾಳಲಾರದೆ ಯುವ ವಕೀಲ ಆತ್ಮಹತ್ಯೆ * ಪರವಾನಗಿ ಪಡೆದ ಪಿಸ್ತೂಲ್‌ನಿಂದ ತಡರಾತ್ರಿ ಗುಂಡು ಹಾರಿಸಿಕೊಂಡು ಸೂಸೈಡ್

ಲಕ್ನೋ(ಜು.11): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಶನಿವಾರ ತಡರಾತ್ರಿ ಯುವ ವಕೀಲರೊಬ್ಬರು ತಮ್ಮ ಕೊಠಡಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಮಗನ ಶವ ಪತ್ತೆಯಾದ ನಂತರ ಇಡೀ ಕುಟುಂಬಕ್ಕೆ ಆಘಾತವಾಗಿದೆ. ಅದೇ ಸಮಯದಲ್ಲಿ, ಮೃತನ ತಂದೆ ತನ್ನ ಮಗನ 3 ಸ್ನೇಹಿತರು ಮತ್ತು ಸ್ಥಳೀಯ ಮುಖಂಡನ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ತಂದೆ ಪ್ರಕಾರ, ಸ್ನೇಹಿತರು ಮತ್ತು ಸ್ಥಳೀಯ ಮುಖಂಡರಿಂದ ನಡೆಯುತ್ತಿದ್ದ ಕಿರುಕುಳದಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಸಂಬಂಧಪಟ್ಟ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಒ ಸಿಟಿ ತಿಳಿಸಿದ್ದಾರೆ.

ಪರವಾನಗಿ ಪಡೆದ ಪಿಸ್ತೂಲ್‌ನಿಂದ ತಡರಾತ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವ ವಕೀಲ

ಇಡೀ ವಿಷಯವು ಗಾಜಿಯಾಬಾದ್ ಜಿಲ್ಲೆಯ ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಯುವ ವಕೀಲರೊಬ್ಬರು ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಕವಿನಗರ ಪ್ರದೇಶದಲ್ಲಿ ವಾಸಿಸುವ ವಕೀಲ ಆಶಿಶ್ ತ್ಯಾಗಿ (27) ಅವರ ಶವ ಅವರ ಮನೆಯ ಕೋಣೆಯಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದು, ಕುಟುಂಬದ ಇತರೆ ಸದಸ್ಯರು ತಮ್ಮ ಊರಿಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ತಂದೆ ರಾಕೇಶ್ ತ್ಯಾಗಿ ವಾಪಸ್ ಬಂದು ನೋಡಿದಾಗ ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಕುಟುಂಬಸ್ಥರು ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ತಿಳಿಸಿದರು. ಆತನ ತಂದೆ ತ್ಯಾಗಿ ಬಾಗಿಲು ಒಡೆದು ಕೊಠಡಿಗೆ ಪ್ರವೇಶಿಸಿದಾಗ ಆಶಿಶ್ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಹತ್ತಿರದಲ್ಲಿ ತಂದೆಯ ಪಿಸ್ತೂಲ್ ಮತ್ತು ಬಳಸಿದ ಕಾರ್ಟ್ರಿಡ್ಜ್ ಬಿದ್ದಿತ್ತು.

16 ಸೆಕೆಂಡ್‌ನಲ್ಲಿ ಸೂಸೈಡ್‌, ಲಿಫ್ಟ್‌ ಹತ್ತಿ ಬಂದಾತ ಐಷಾರಾಮಿ ಮಾಲ್‌ನಿಂದ ಹಾರಿ ಆತ್ಮಹತ್ಯೆ!

ಕಾರು ಡಿಕ್ಕಿ ಹೊಡೆದ ನಂತರ ಸ್ನೇಹಿತರು ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದ ತಂದೆ

ಬೆರಳಚ್ಚು ಪಡೆದಿರುವ ಫೋರೆನ್ಸಿಕ್ ತಂಡವನ್ನು ತನಿಖೆಗೆ ಕರೆಯಲಾಗಿದೆ ಎಂದು ಕವಿನಗರ ಪೊಲೀಸ್ ಅಧಿಕಾರಿ (ನಗರ) ಅವನೀಶ್ ಕುಮಾರ್ ತಿಳಿಸಿದ್ದಾರೆ. ವಕೀಲರ ತಂದೆ ನೀಡಿದ ದೂರನ್ನು ಉಲ್ಲೇಖಿಸಿದ ಸಿಒ, ಆಶಿಶ್ ತನ್ನ ಮೂವರು ಸ್ನೇಹಿತರಾದ ಸಂಜಯ್ ರಾಠಿ, ಅನುಜ್ ಚೌಧರಿ ಮತ್ತು ಅಕ್ಷಯ್ ಅವರೊಂದಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದರು ಎಂದು ಹೇಳಿದರು. ಡಿಕ್ಕಿ ಹೊಡೆದು ಕೊಂಚ ಡ್ಯಾಮೇಜ್‌ ಆಗಿದ್ದ ಕಾರನ್ನು ಅಪಘಾತದ ವೇಳೆ ಆಶಿಶ್ ತ್ಯಾಗಿ ಓಡಿಸುತ್ತಿದ್ದ. ಈ ವೇಳೆ ಕೋಪಗೊಂಡ ಮೂವರು ಆಶಿಶ್ ನನ್ನು ಥಳಿಸಿ ಚಿನ್ನದ ಬಳೆ, ಸರ, ಉಂಗುರ ಕಸಿದುಕೊಂಡಿದ್ದಾರೆ. ಅಲ್ಲದೇ ರಿಪೇರಿಗೆ 1.5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಕಾರನ್ನು ರಿಪೇರಿ ಮಾಡಿಸುವುದಾಗಿ ತ್ಯಾಗಿ ಭರವಸೆ ನೀಡಿದ ನಂತರವೂ ಆತನಿಗೆ ಚಿತ್ರಹಿಂಸೆ ನೀಡುತ್ತಿದ್ದರೆಂದಿದ್ದಾರೆ.

ಗೆಳೆಯರೊಂದಿಗೆ ಸೇರಿ ಪತ್ನಿಯ ಮೇಲೆ ಮದ್ಯವ್ಯಸನಿ ಪತಿ ಅತ್ಯಾಚಾರ: ವೀಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್

ಸ್ಥಳೀಯ ಮುಖಂಡರ ಕಚೇರಿಯಿಂದ ಕರೆ, ಮೃತರ ಕಾರನ್ನು ಕಸಿದುಕೊಂಡರು

ಶನಿವಾರ ತನ್ನ ವಕೀಲ ಪುತ್ರ ಆಶಿಶ್ ತ್ಯಾಗಿಯನ್ನು ಸ್ಥಳೀಯ ನಾಯಕ ಅಜಯ್ ಪಾಲ್ ಪ್ರಮುಖ್ ಕಚೇರಿಗೆ ಕರೆಸಿಕೊಂಡು ಮತ್ತೆ ಕಿರುಕುಳ ನೀಡಿ ಅವನಿಂದ ಕಾರನ್ನು ಕಿತ್ತುಕೊಂಡಿದ್ದರು ಎಂದು ಸಂತ್ರಸ್ತನ ತಂದೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಚಿತ್ರಹಿಂಸೆಯಿಂದ ಬೇಸತ್ತು ಮಗ ಒಂಟಿಯಾಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ. ಈ ವೇಳೆ ಮೃತನ ಮೂವರು ಸ್ನೇಹಿತರು ಹಾಗೂ ಸ್ಥಳೀಯ ಮುಖಂಡನ ವಿರುದ್ಧ ತಂದೆ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..