ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ| ಮೂವರು ವಕೀಲರಿಗೆ ಗಂಭೀರ ಗಾಯ| ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ದುರ್ಘಟನೆ| ಲಕ್ನೋ ಬಾರ್ ಅಸೋಸಿಯೇಷನ್'ನ ಜಂಟಿ ಕಾರ್ಯದರ್ಶಿಯೇ ದಾಳಿಕೋರರ ಗುರಿ?| ಸಂಜೀವ್ ಲೋಧಿ ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ಶಂಕೆ| ಸ್ಥಳದಿಂದ ಮೂರು ಜೀವಂತ ಬಾಂಬ್ ವಶಕ್ಕೆ ಪಡೆದ ಪೊಲೀಸರು|
ಲಕ್ನೋ(ಫೆ.13): ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ವಕೀಲರು ಗಾಯಗೊಂಡಿರುವ ಘಟನೆ ನಡೆದಿದೆ.
Crude bomb hurled in a Lucknow court. Two lawyers injured. Three live crude bombs recovered.More details awaited. pic.twitter.com/iXvxNK9Tqb
— ANI UP (@ANINewsUP)ಲಕ್ನೋ ಬಾರ್ ಅಸೋಸಿಯೇಷನ್'ನ ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿಯವರನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಹುಬ್ಬಳ್ಳಿ ರೈಲ್ವೆ ಬಾಂಬ್ ಸ್ಫೋಟ ಇನ್ನೂ ನಿಗೂಢ!
ಉತ್ತರಪ್ರದೇಶ ವಿಧಾನಸಭಗೆ ಕೆಲವೇ ದೂರಗಳಲ್ಲಿ ಇರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Lucknow: Crude bomb was hurled towards chamber of lawyer Sanjeev Lodhi who has blamed another lawyer Jitu Yadav for the incident. Police at the spot https://t.co/X8eJ7SJJbn
— ANI UP (@ANINewsUP)ಇನ್ನು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳದಿಂದ ಇನ್ನೂ ಮೂರು ಜೀವಂತ ಬಾಂಬ್’ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.