ದರ್ಪಕ್ಕೇನು ಹೇಳೋಣ, 100 ರೂ.  ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಪುಡಿಪುಡಿ

Published : Jul 24, 2020, 09:36 PM ISTUpdated : Jul 24, 2020, 09:38 PM IST
ದರ್ಪಕ್ಕೇನು ಹೇಳೋಣ, 100 ರೂ.  ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಪುಡಿಪುಡಿ

ಸಾರಾಂಶ

ಮುಗ್ಧ ವ್ಯಾಪಾರಿಯ ಮೇಲೆ ಅಧಿಕಾರಿಗಳ ದರ್ಪ/ ಹಿಂದೆ ಮುಂದೆ ನೋಡದೆ ಮೊಟ್ಟೆ ವಾಹನ ಜಖಂ/ ನೂರು ರೂ. ಲಂಚ ಕೊಡದಿದ್ದಕ್ಕೆ ಗಾಡಿ ಧ್ವಂಸ/ ಅಧಿಕಾರಿಗಳ ಕ್ರಮಕ್ಕೆ ಖಂಡನೆ

ಇಂದೋರ್(ಜು.25)  ನೂರು ರೂ. ಲಂಚ ಕೊಟ್ಟಿಲ್ಲ ಎಂಬ ಕಾರಣಕ್ಕೆ 4 ವರ್ಷದ ಹುಡುಗನ ತಳ್ಳು ಗಾಡಿಯನ್ನು ಕೆಳಕ್ಕೆ  ಕೆಡಗಿದ ಅಧಿಕಾರಿಗಳು ಎಲ್ಲ ಮೊಟ್ಟೆ ಒಡೆದು ಹಾಕಿದ್ದಾರೆ.

ರಸ್ತೆ ಪಕ್ಕದಿಂದ ನಿನ್ನ ತಳ್ಳುವ ಗಾಡಿ ತೆಗಿ ಎಂದು ಪೊಲೀಸರು ಹೇಳಿದ್ದಾರೆ. ಹಾಗೆ ಬಿಡಬೇಕು ಎಂದರೆ ನೂರು ರೂ. ಲಂಚ ತಾ ಎಂದಿದ್ದಾರೆ. ಹುಡುಗ ಕೊಡಲು ಒಪ್ಪದಿದ್ದಾಗ ಹಿಂದೆ ಮುಂದೆ ನೋಡದೆ ಗಾಡಿಯನ್ನು ಬಿಸಾಡಿದ್ದು ಮೊಟ್ಟೆ ನಾಶವಾಗಿದೆ.

ರಾಯಭಾಗ ತಹಶೀಲ್ದಾರ್ ಮೇಲೆ ಶಾಶಕ ಧುರ್ಯೋಧನ ದರ್ಪ್

ಕೊರೋನಾ ಕಾರಣದಿಂದ ಮೊದಲೆ ವ್ಯಾಪಾರ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.   ಇಡೀ ಕುಟುಂಬದ ಜವಾಬ್ದಾರಿ ಹುಡುಗನ ಮೇಲಿದ್ದು ಆತನ ಮೇಲೆ ಅಧಿಕಾರಿಗಳು ದರ್ಪ ತೋರಿದ್ದಾರೆ.

ಹೊಟ್ಟೆ ಪಾಡಿಗಾಗಿ ಮೊಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಹುಡುಗನ ಮೇಲೆ ದೌರ್ಜನ್ಯವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಧಿಕಾರಿಗಳ ನಡವಳಿಕೆಯನ್ನು ಖಂಡಿಸಲಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!