ಸವಣೂರು: ಮೃತ ರೈತ ಕುಟುಂಬಕ್ಕೆ ಸಂತ್ವಾನ ಹೇಳಿದ ಸಚಿವ ಬೊಮ್ಮಾಯಿ

Published : Nov 02, 2019, 10:44 AM IST
ಸವಣೂರು: ಮೃತ ರೈತ ಕುಟುಂಬಕ್ಕೆ ಸಂತ್ವಾನ ಹೇಳಿದ ಸಚಿವ ಬೊಮ್ಮಾಯಿ

ಸಾರಾಂಶ

ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ|ರೈತರು ಎದೆಗುಂದಿ ಆತ್ಮಹತ್ಯೆಗೆ ಮುಂದಾಗಬಾರದು ಎಂದಸಚಿವ ಬಸವರಾಜ ಬೊಮ್ಮಾಯಿ|ಆತ್ಮಹತ್ಯಗೆ ಶರಣಾದ ರೈತ ಬಸವರಾಜ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ ವಿತರಿಸಲಾಗುವದು|

ಸವಣೂರು[ಅ.2]: ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿದ ರೈತರಿಗೆ ಹಾಗೂ ಕುಟುಂಬಸ್ಥರಿಗೆ ಸರ್ಕಾರ ನೆರವಿನೊಂದಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದೆ. ಆದ್ದರಿಂದ, ರೈತರು ಎದೆಗುಂದಿ ಆತ್ಮಹತ್ಯೆಗೆ ಮುಂದಾಗಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. 

ತಾಲೂಕಿನ ಮನ್ನಂಗಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ರೈತ ಬಸವರಾಜ ಶಿವಪ್ಪ ದೇವಗಿರಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಂತ್ವಾನ ಹೇಳಿ ಮಾತನಾಡಿದರು. ನೆರೆ ಹಾವಳಿಯಿಂದಾಗಿ ತಾಲೂಕಿನ ನದಿ ದಂಡೆಯ ಗ್ರಾಮಗಳ ರೈತರು ಬಹಳಷ್ಟು ಪರದಾಡುವಂತಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕುರಿತು ಈಗಾಲೇ ವರದಿಯನ್ನು ಪಡೆದುಕೊಳ್ಳಲಾಗಿದೆ. ರೈತರು ಎದೆಗುಂದದೇ ಕುಟುಂಬಸ್ಥರಿಗೆ ಹಾಗೂ ಇತರರಿಗೆ ಧೈರ್ಯ ಹೇಳಬೇಕು. ಆತ್ಮಹತ್ಯಗೆ ಶರಣಾದ ರೈತ ಬಸವರಾಜ ಕುಟುಂಬಕ್ಕೆ ಮುಂದಿನ ಒಂದು ವಾರದಲ್ಲಿ ಸರ್ಕಾರದಿಂದ 5 ಲಕ್ಷ ಪರಿಹಾರ ವಿತರಿಸಲಾಗುವದು ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುಕನಮ್ಮನವರ, ತಹಸೀಲ್ದಾರ್ ವಿ.ಡಿ. ಸಜ್ಜನ್,ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ,ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ, ಮಾಜಿ ಅಧ್ಯಕ್ಷರುದ್ರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ, ಪ್ರಮುಖರಾದ ಮೋಹನ ಮೆಣಸಿನಕಾಯಿ, ಶಿವಪುತ್ರಪ್ಪ ಕಲಕೋಟಿ, ಎಂ.ಕೆ. ಬಿಜ್ಜೂರ, ಚಂದ್ರ ಆಡೂರ ಹಾಗೂ ಇತರರು ಇದ್ದರು.

PREV
click me!

Recommended Stories

ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!
ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ