ರಾಜ್ಯ ಸರ್ಕಾರಕ್ಕೆ 5-6 ತಿಂಗಳ ಆಯುಷ್ಯ : ಹೆಣ್ಣು ಯುದ್ಧ ತಡೆಯುತ್ತಾಳೆಂದು ಬ್ರಹ್ಮಾಂಡ ಭವಿಷ್ಯ!

Published : Oct 19, 2019, 09:53 AM IST
ರಾಜ್ಯ ಸರ್ಕಾರಕ್ಕೆ 5-6 ತಿಂಗಳ ಆಯುಷ್ಯ : ಹೆಣ್ಣು ಯುದ್ಧ ತಡೆಯುತ್ತಾಳೆಂದು ಬ್ರಹ್ಮಾಂಡ ಭವಿಷ್ಯ!

ಸಾರಾಂಶ

ರಾಜ್ಯ ಸರ್ಕಾರಕ್ಕೆ ಐದು ತಿಂಗಳಷ್ಟೇ ಆಯುಷ್ಯ. ಹೆಣ್ಣೊಬ್ಬಳು ಮುಂದಾಗುವ ಯುದ್ಧವನ್ನು ತಡೆಯಬಲ್ಲಳು ಎಂದು ಭವಿಷ್ಯ ನುಡಿಯಲಾಗಿದೆ. 

ಹಾಸನ(ಅ.19) : ಕೇವಲ 5 ತಿಂಗಳ ಹಿಂದಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯದ ಬಿಜೆಪಿ ಸರ್ಕಾರ ನವೆಂಬರ್‌ನಿಂದ ಜನವರಿ ಮುಗಿಯುವುದರೊಳಗೆ ಅಂತ್ಯವಾಗುತ್ತದೆ. ಹೊಸಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಒಂದು ಹೆಣ್ಣು ಯುದ್ಧವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಜನರು ಪ್ರಕೃತಿ ವಿಕೋಪದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ ಈಗಾಗಲೇ ನೆರೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಮುಂದಿನ ನವೆಂಬರ್‌ ನಂತರ ಇನ್ನೂ ಹೆಚ್ಚಿನ ಅವಗಡಗಳು ಸಂಭವಿಸುವುದು ಖಚಿತ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಊಟಕ್ಕೂ ತೊಂದರೆಯಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಕ್ಕಿ ದರ ಕೆಜಿಗೆ 1000 ರು.ಗೆ ಏರುವ ಸಾಧ್ಯತೆಯೂ ಇದ್ದೂ, ಕೇತು ಗುರು ಜೊತೆ ಇದ್ದರೆ ಇವೆಲ್ಲಾ ಅವಗಡಗಳು ಸಂಭವಿಸುತ್ತದೆ. ತಮಿಳುನಾಡಿಗೆ ಹೋಗಿ ನಾವು ರಂಗನಾಥನ ದರ್ಶನ ಮಾಡುತ್ತೇವೆ. ನಮ್ಮ ಕರುನಾಡಲ್ಲೇ ಇರುವ ತಾಯಿ ಹಾಸನಾಂಬಯಂತಹ ದೇವಿ ದರ್ಶನ ಪಡೆಯಬೇಕು. ಹಾಸನಾಂಬ ಕ್ಷೇತ್ರ ತುಂಬಾ ವೈಷಿಷ್ಟ್ಯವಾದ ಕ್ಷೇತ್ರವಾಗಿದೆ ಎಂದರು.

PREV
click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ರಕ್ತಚಂದ್ರನ ಮಾಯೆ: ನಾಳೆ ರಾಜ್ಯದ ಹಲವು ದೇಗುಲದಲ್ಲಿ ದರ್ಶನ ಸಮಯ ಬದಲಾವಣೆ, ಹೋಳಿ ಹಬ್ಬಕ್ಕೆ ಯಾವುದೇ ತೊಂದರೆ ಇಲ್ಲ