ಬೆಂಗಳೂರು: ವೀರ್‌ ಸಾವರ್ಕರ್‌ ಕಂಚಿನ ಪುತ್ಥಳಿ ಅನಾವರಣ

Kannadaprabha News   | Asianet News
Published : Aug 16, 2020, 08:06 AM IST

ಬೆಂಗಳೂರು(ಆ.16):ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಂದರ್ಭದಲ್ಲಿ 14 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌. ಇವರ ದೇಶಪ್ರೇಮ ಹಾಗೂ ದೇಶಭಕ್ತಿ ಯುವಜನತೆಗೆ ಮಾದರಿಯಾಗಿದೆ ಎಂದು ಮೇಯರ್‌ ಎಂ. ಗೌತಮ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.   

PREV
14
ಬೆಂಗಳೂರು: ವೀರ್‌ ಸಾವರ್ಕರ್‌ ಕಂಚಿನ ಪುತ್ಥಳಿ ಅನಾವರಣ

ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸಾವರ್ಕರ್‌ ಅವರ 5.5 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಮಂಗಲ್‌ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಈ ಮಹಾನ್‌ ವ್ಯಕ್ತಿಯ ಇತಿಹಾಸ ತಿಳಿದರೆ ಎಂಥಹ ಅಪ್ರತಿಮ ಹೋರಾಟಗಾರ ಎಂಬುದು ಅರಿವಿಗೆ ಬರುತ್ತದೆ. ಪಾಲಿಕೆ 198 ವಾರ್ಡ್‌ ಗಳ ಪೈಕಿ ಪ್ರಥಮವಾಗಿ ಯಡಿಯೂರು ವಾರ್ಡ್‌ ನಲ್ಲಿ ವೀರ ಸಾವರ್ಕರ ಪುತ್ಥಳಿ ಅನಾವರಣವಾಗುತ್ತಿರುವುದು ಸಂತಸ ತಂದಿದೆ ಎಂದರು.

ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸಾವರ್ಕರ್‌ ಅವರ 5.5 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಮಂಗಲ್‌ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಈ ಮಹಾನ್‌ ವ್ಯಕ್ತಿಯ ಇತಿಹಾಸ ತಿಳಿದರೆ ಎಂಥಹ ಅಪ್ರತಿಮ ಹೋರಾಟಗಾರ ಎಂಬುದು ಅರಿವಿಗೆ ಬರುತ್ತದೆ. ಪಾಲಿಕೆ 198 ವಾರ್ಡ್‌ ಗಳ ಪೈಕಿ ಪ್ರಥಮವಾಗಿ ಯಡಿಯೂರು ವಾರ್ಡ್‌ ನಲ್ಲಿ ವೀರ ಸಾವರ್ಕರ ಪುತ್ಥಳಿ ಅನಾವರಣವಾಗುತ್ತಿರುವುದು ಸಂತಸ ತಂದಿದೆ ಎಂದರು.

24

ಸಾವರ್ಕರ್‌ ಕಂಚಿನ ಪುತ್ಥಳಿ 5.5 ಅಡಿ ಎತ್ತರವಿದ್ದು, 500 ಕೆ.ಜಿ. ತೂಕವಿದ್ದು 5 ಲಕ್ಷ ರು. ವೆಚ್ಚವಾಗಿದೆ. ಸಾವರ್ಕರರ ಜನನದಿಂದ, ಮರಣದವರೆಗಿನ ಇತಿಹಾಸ, ಹೋರಾಟ ಹಾಗೂ ಅವರ 9 ಕೃತಿಗಳ ಮಾಹಿತಿ ನೀಡಲಾಗಿದೆ.

ಸಾವರ್ಕರ್‌ ಕಂಚಿನ ಪುತ್ಥಳಿ 5.5 ಅಡಿ ಎತ್ತರವಿದ್ದು, 500 ಕೆ.ಜಿ. ತೂಕವಿದ್ದು 5 ಲಕ್ಷ ರು. ವೆಚ್ಚವಾಗಿದೆ. ಸಾವರ್ಕರರ ಜನನದಿಂದ, ಮರಣದವರೆಗಿನ ಇತಿಹಾಸ, ಹೋರಾಟ ಹಾಗೂ ಅವರ 9 ಕೃತಿಗಳ ಮಾಹಿತಿ ನೀಡಲಾಗಿದೆ.

34

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಉಪ ಮೇಯರ್‌ ರಾಮಮೋಹನ ರಾಜು, ಕಾರ್ಪೊರೇಟರ್‌ ಪೂರ್ಣಿಮಾ ರಮೇಶ್‌, ದಕ್ಷಿಣ ವಲಯದ ಜಂಟಿ ಆಯುಕ್ತ ವಿ.ಎನ್‌. ವೀರಭದ್ರಸ್ವಾಮಿ, ಮಾಜಿ ಕಾರ್ಪೊರೇಟರ್‌ ಎನ್‌.ಆರ್‌ ರಮೇಶ್‌ ಇದ್ದರು.

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಉಪ ಮೇಯರ್‌ ರಾಮಮೋಹನ ರಾಜು, ಕಾರ್ಪೊರೇಟರ್‌ ಪೂರ್ಣಿಮಾ ರಮೇಶ್‌, ದಕ್ಷಿಣ ವಲಯದ ಜಂಟಿ ಆಯುಕ್ತ ವಿ.ಎನ್‌. ವೀರಭದ್ರಸ್ವಾಮಿ, ಮಾಜಿ ಕಾರ್ಪೊರೇಟರ್‌ ಎನ್‌.ಆರ್‌ ರಮೇಶ್‌ ಇದ್ದರು.

44

ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ಅವರ ಕಂಚಿನ ಪುತ್ಥಳಿಯನ್ನು ಮೇಯರ್‌ ಗೌತಮ್‌ ಕುಮಾರ್‌ ಶನಿವಾರ ಅನಾವರಣಗೊಳಿಸಿದರು.

ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ಅವರ ಕಂಚಿನ ಪುತ್ಥಳಿಯನ್ನು ಮೇಯರ್‌ ಗೌತಮ್‌ ಕುಮಾರ್‌ ಶನಿವಾರ ಅನಾವರಣಗೊಳಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories