ಜೋಪಾನವಾಗಿ ಇರಿಸಿಕೊಂಡಿದ್ದೇನೆ
ನನ್ನ 25ನೇ ವರ್ಷದಿಂದ ನಾನು ಓದಿದ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಪತ್ರಿಕೆಗಳನ್ನು ಓದಿದ ಬಳಿಕ ಅವುಗಳನ್ನು ಜೋಪಾನವಾಗಿಟ್ಟುಕೊಂಡು ಬಂದಿದ್ದೇನೆ. ಮನೆಯವರು ಏನಾದರೂ ಅವಶ್ಯಕತೆಗೆ ಪೇಪರ್ ಕೇಳಿದರೂ ನಾನು ಸಂಗ್ರಹಿಸಿಟ್ಟ ಪತ್ರಿಕೆಗಳನ್ನು ಕೊಟ್ಟಿಲ್ಲ.
-ಸಿ. ಮುತ್ತಪ್ಪ ಪೂಜಾರಿ, ಪತ್ರಿಕೆ ಸಂಗ್ರಹಕಾರ.
ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿರುವ ಮುತ್ತಪ್ಪ ಪೂಜಾರಿ ಬಳಿ ಗುರುಗಳಿಗೆ ಸಂಬಂಧಪಟ್ಟ ಪುಸ್ತಕಗಳಿವೆ. ಅವರು ಮಲಗುವ ಮಂಚದ ಮೇಲೆ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ದೇಶದ ಸಂವಿಧಾನದ ಪುಸ್ತಕಗಳು ಸದಾ ಇರುತ್ತದೆ. ಸದಾ ಶ್ವೇತ ವಸ್ತ್ರಧಾರಿಯಾಗಿ ಬದುಕಿನಲ್ಲಿಯೂ ಉತ್ತಮ ಸಂಸ್ಕಾರ ಅಳವಡಿಸಿಕೊಂಡಿರುವ ಇವರು ಈಗಲೂ ಪ್ರತಿದಿನ ಬೆಳಗ್ಗೆ ರೇಡಿಯೋ ಕೇಳುವುದು, ಪತ್ರಿಕೆ ಓದುವುದನ್ನು ಯೋಗಭ್ಯಾಸದಂತೆಯೇ ಅಳವಡಿಸಿಕೊಂಡಿದ್ದಾರೆ.