ಈ ವೇಳೆ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಚಿವರಾದ ಡಿ.ಸುಧಾಕರ್, ಕೆ.ಎನ್.ರಾಜಣ್ಣ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೇರಿದಂತೆ ಜಿಲ್ಲೆಯ ಹಾಗೂ ಹೊರಗಿನ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
೧೫ ಜೈನಮಠಗಳ ಭಟ್ಟಾರಕರು ಪಾವನ ಸಾನಿಧ್ಯ ವಹಿಸುವರು ಎಂದು ನುಡಿದರು.
ನಂತರ ಸುಮಾರು ೧೦ ಸಾವಿರಕ್ಕೂ ಅಧಿಕ ಗುರು ಭಕ್ತರ ಸಮ್ಮುಖದಲ್ಲಿ ಶ್ರೀ ಚರಣ ಪಾದುಕ ಸ್ಥಾಪನೆ, ಚರಣಾಭಿ?ಕ, ಪು?ವೃಷ್ಟಿ, ವಿನಯಾಂಜಲಿ ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಮತ್ತು ಸಭಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು. ಒಟ್ಟಾರೆ ಸುಮಾರು ೧೫ ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ನುಡಿದರು.
೩ನೇ ಬೆಟ್ಟ: ನಿಷಿಧಿ ಮಂಟಪ ಉದ್ಘಾಟನೆ ನಂತರ ಬೆಳಗೊಳದ ವಿಂಧ್ಯಗಿರಿ, ಚಂದ್ರಗಿರಿ ಜೊತೆಗೆ ಇನ್ನೊಂದು ಚಿಕ್ಕ ಬೆಟ್ಟ ಸೇರ್ಪಡೆಯಾಗಲಿದ್ದು, ಅದಕ್ಕೆ ಪೂರ್ವ ಭಟ್ಟಾರಕರ ನಿಷಿಧಿ ಬೆಟ್ಟ ಎಂದು ಹೆಸರಿಡಲಾಗುವುದು ಎಂದರು.
ಅಲ್ಲದೆ ೧೯೮೧ ರಲ್ಲಿ ೧೦ ಹಳ್ಳಿಗಳನ್ನು ಶ್ರೀಗಳು ದತ್ತು ಪಡೆದಿದ್ದರು.ಆ ಗ್ರಾಮಗಳಿಗೀಗ ಶುದ್ಧ ಕುಡಿಯುವ ನೀರು, ಹೈಮಾಸ್ಟ್ ದೀಪ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಭಿನವ ಚಾರುಶ್ರೀ ತಿಳಿಸಿದರು.
ಪೂರ್ವ ಶ್ರೀಗಳು ಐದುವರೆ ದಶಕಗಳ ಕಾಲ ಶ್ರೀ ಕ್ಷೇತ್ರದ ಸೇವೆ ಮಾಡಿದ್ದು, ಅದರ ಸ್ಮರಣಾರ್ಥ ೫೪ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ ಎಂದು ವಿವರಿಸಿದರು. ಪೂಜ್ಯರಿಗೆ ಮಾವಿನಮರ, ಹಣ್ಣು ಎಂದರೆ ಬಲು ಇಷ್ಟ ಅದಕ್ಕಾಗಿ ೧೦ ಸಾವಿರ ಮಾವಿನಗಿಡ ವಿತರಿಸಲಾಗುತ್ತಿದೆ ಎಂದು ಇದೇ ವೇಳೆ ಹೇಳಿದರು. ಗುರುಭಕ್ತರು, ಶ್ರೀಗಳ ಅನುಯಾಯಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀಗಳು ಮನವಿ ಮಾಡಿದರು.
ಮತ್ತೊಂದು ವಿಶೇಷ ಎಂದರೆ ಪರಮಪೂಜ್ಯರ ಜನ್ಮದಿಂದ ಸಮಾಧಿವರೆಗಿನ ಜೀವ ಮಾನದ ಸಾಧನೆ, ಜೀವನ ಚರಿತ್ರೆ ಸಾರುವ ಶಿಲಾಲೇಖವನ್ನು( ಶಿಲಾಶಾಸನ) ನಿಷಿಧಿ ಮಂಟಪದ ಪಕ್ಕದಲ್ಲೇ ಕೆತ್ತಲಾಗಿದೆ. ಶ್ರೀ ಕ್ಷೇತ್ರದಲ್ಲಿ ೫೭೨ ಶಾಸನಗಳಿದ್ದು, ೫೭೩ನೇ ಶಾಸನ ಹಿರಿಯರಾದ ಮಹಾಸ್ವಾಮಿಗಳದ್ದಾಗಲಿದೆ ಎಂದರು. ಇದು ೭ ಅಡಿ ಎತ್ತರ, ೬ ಅಡಿ ಅಗಲ ಇದ್ದು, ನಡುಗನ್ನಡ ಭಾಷೆಯಲ್ಲಿದೆ. ದೇಶದಲ್ಲೇ ದೊಡ್ಡ ಶಾಸನವಾಗಲಿದೆ. ಶಾಶ್ವತವಾಗಿ ಉಳಿಯಲಿ ಎಂದು ಬರೋಬ್ಬರಿ ೬ ಇಂಚು ದಪ್ಪದ ಕಲ್ಲಿನಲ್ಲಿ ಕೆತ್ತಲಾಗಿದ್ದು, ಡಿ.೬ ರಂದೇ ಲೋಕಾರ್ಪಣೆ ಆಗಲಿದೆ ಎಂದು ವಿವರಣೆ ನೀಡಿದರು.