ಕೆಲವರು ಹೀಗೂ ಇರುತ್ತಾರೆ
ಇನ್ನು ಇದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ, ಹಿಂದೂ-ಮುಸ್ಲಿಂ ವಿಚಾರವನ್ನೆತ್ತಿ ಕೋಮು ಸೌಹಾರ್ದ ಕದಡಲು ಯತ್ನಿಸಿದ ಪ್ರಕರಣ ಸಮಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಾಸ್ತವವಾಗಿ, ಮುಸ್ಲಿಂ ದಂಪತಿ ತಮ್ಮ ಇಬ್ಬರು ಹಿಂದೂ ಸ್ನೇಹಿತರಿಗೆ ಕಾರಿನಲ್ಲಿ ಲಿಫ್ಟ್ ನೀಡಿದ್ದರು. ಈ ವಿಷಯದ ಬಗ್ಗೆ, ಮೋಟಾರ್ ಸೈಕಲ್ ನಲ್ಲಿ ಅಲ್ಲಿ ಹಾದು ಹೋಗುತ್ತಿದ್ದ ಸಮಿತರಾಜ್ ಮತ್ತು ಸಂದೀಪ್ ಪೂಜಾರಿ ಎಂಬವರು ಮುಸ್ಲಿಂಮರನ್ನು ಯಾಕೆ ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡರು ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ, ಮುಸ್ಲಿಂ ಮಹಿಳೆಯ ದೂರು ನೀಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.