ತುಮಕೂರು ಜಿಲ್ಲಾಡಳಿತದಿಂದ ಶಕ್ತಿ ಯೋಚನೆಗೆ ಚಾಲನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಭಾಗವಹಿಸಿದ್ದರು. ಮಹಿಳಾ ಪ್ರಯಾಣಿಕರಿಗೆ ತಾವೇ ಟಿಕೆಟ್ ನೀಡಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಪ್ರಯಾಣಕ್ಕೆ ದೂರದ ಮಿತಿ ಇಲ್ಲ. ನೀವು ಇಲ್ಲಿಂದ ಮಂಗಳೂರಿಗೆ ಹೋಗಬಹುದು. ಬಳ್ಳಾರಿಗೆ ಹೋಗಬಹುದು. ನಾವು ಯಾಕೆ ಗುರುತಿನ ಚೀಟಿ ಕೇಳ್ತಿವಿ ಅಂದ್ರೆ, ಹೊರ ರಾಜ್ಯದವ್ರು ಇದರ ಪ್ರಯೋಜನ ತೆಗೆದುಕೊಳ್ಳಬಾರದು ಅಂತಾ ಅದನ್ನ ಕೇಳ್ತಿದ್ದೀವಿ ಎಂದಿದ್ದಾರೆ.