ಕೊರೋನಾ ಮುಕ್ತ ಮೈಸೂರು: ಅಚ್ಚರಿಗೆ ಕಾರಣವಾಯ್ತು ಜಿಲ್ಲಾ ಉಸ್ತುವಾರಿ ಸಚಿವರ ನಡೆ....
First Published May 16, 2020, 5:35 PM ISTಅರಮನೆ ನಗರಿ ಮೈಸೂರು ಜಿಲ್ಲೆ ಕೊರೋನಾ ಮುಕ್ತ ಜಿಲ್ಲೆಯಾಗಿದೆ. ಮೈಸೂರಿನಲ್ಲಿ ಇವತ್ತಿನ ಮಟ್ಟಿಗೆ ಯಾವುದೇ ಕೊರೋನಾ ಪಾಸಿಟಿವ್ ಇಲ್ಲ. ಶರವೇಗದಲ್ಲಿ ಹಬ್ಬಿ ಅಷ್ಟೇ ಬೇಗ ಜಿಲ್ಲೆಯಿಂದ ಮಾಯವಾಗಿದ್ದು, ಎಲ್ಲರಲ್ಲಿ ಸಂತಸ ಮೂಡಿಸಿದೆ. ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಇಂದು (ಶನಿವಾರ) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೇ ವಿವಿಧ ಸಮುದಾಯದ ಮುಖಂಡನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.