ಕೊರೋನಾ ಮುಕ್ತ ಮೈಸೂರು: ಅಚ್ಚರಿಗೆ ಕಾರಣವಾಯ್ತು ಜಿಲ್ಲಾ ಉಸ್ತುವಾರಿ ಸಚಿವರ ನಡೆ....

First Published May 16, 2020, 5:35 PM IST

ಅರಮನೆ ನಗರಿ ಮೈಸೂರು ಜಿಲ್ಲೆ ಕೊರೋನಾ ಮುಕ್ತ ಜಿಲ್ಲೆಯಾಗಿದೆ. ಮೈಸೂರಿನಲ್ಲಿ ಇವತ್ತಿನ ಮಟ್ಟಿಗೆ ಯಾವುದೇ ಕೊರೋನಾ ಪಾಸಿಟಿವ್ ಇಲ್ಲ. ಶರವೇಗದಲ್ಲಿ ಹಬ್ಬಿ ಅಷ್ಟೇ ಬೇಗ ಜಿಲ್ಲೆಯಿಂದ ಮಾಯವಾಗಿದ್ದು, ಎಲ್ಲರಲ್ಲಿ ಸಂತಸ ಮೂಡಿಸಿದೆ. ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಇಂದು (ಶನಿವಾರ) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೇ ವಿವಿಧ ಸಮುದಾಯದ ಮುಖಂಡನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮೈಸೂರು ಜಿಲ್ಲೆ ಕೊರೋನಾ ಮುಕ್ತವಾದ ಹಿನ್ನೆಲೆಯಲ್ಲಿ ಇಂದು (ಶನಿವಾರ) ಚಾಮುಂಡಿ ಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡಿ ಮಾತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹಸೇರಿದಂತೆ ಹಲವರುವಿಶೇಷ ಪೂಜೆ ಸಲ್ಲಿಸಿದರು
undefined
ಮೈಸೂರು ಕೊರೋನಾ ಮುಕ್ತಕ್ಕಾಗಿ ಹೋರಾಡಿದ ಡಿಸಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಸಂವಿಧಾನ ಪುಸ್ತಕ ಹಾಗೂ ಪುಷ್ಪ ಮಳೆಗೈದು ಅಭಿನಂದನೆ ಸಲ್ಲಿಸಿರುವುದು
undefined
ರಾಜ್ಯದ 40500 ಆಶಾ ಕಾರ್ಯಕರ್ತರಿಗೆ ಅನುಕೂಲವಾಗುವ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ 180 ಜನರಿಗೆ ಮೈಸೂರಿನಲ್ಲಿ ವಿತರಣೆ ಮಾಡುವ ಮೂಲಕ ಚಾಲನೆ ನೀಡದರು.
undefined
ಮೈಸೂರಿನ ಅರಮನೆಗೆ ಭೇಟಿ ನೀಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು,
undefined
ಆದ್ರೆ, ಈ ಭೇಟಿ ಮಾತುಕತೆ ಅಚ್ಚರಿ ಮೂಡಿಸಿದೆ.
undefined
ಮೈಸೂರಿನಲ್ಲಿ ಇಂದು ಜೈನ ಮುನಿಗಳನ್ನು ಭೇಟಿ ಮಾಡಿದರು.
undefined
ಹಾಗೇಮೈಸೂರಿನ ಬಿಷಪ್ ಚರ್ಚ್ ಗೆ ಭೇಟಿ ನೀಡಿ ಫಾದರ್ ರವರನ್ನು ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ.
undefined
ಮೈಸೂರಿನ ಬಿಷಪ್ ಚರ್ಚ್,ಜೈನ ಮುನಿ ಮತ್ತುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಭೇಟಿ ಮಾಡಿರುವುದುಸಹಕಾರಿಸಚಿವಎಸ್‌ಟಿ ಸೋಮಶೇಖರ್ ಅವರ ನಡೆ ಅಚ್ಚರಿ ಮೂಡಿಸಿದಂತೂ ಸತ್ಯ.
undefined
click me!