ಮೈಸೂರು (ಜು.21): ಮೇಕೆದಾಟು ಯೋಜನೆ ಮಾಡಲು ನಮ್ಮ ಸರ್ಕಾರ ತಯಾರಿದೆ. ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಯವರು ತಮಿಳುನಾಡು ಸರ್ಕಾರವನ್ನು ನಾವು ಒಪ್ಪಿಸಲಿ ಎಂದು ರಾಜಕೀಯ ಮಾಡುತ್ತಿದ್ದಾರೆ. ಹಾಗಾದರೆ, ಗೋವಾ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದು, ಯಾಕೆ ಮಹಾದಾಯಿ ಯೋಜನೆ ಮಾಡಿಲ್ಲ ಎಂದು ಅವರು ತಿರುಗೇಟು ನೀಡಿದರು.