ಆ್ಯಪ್ ಸೃಷ್ಟಿಕರ್ತರು ಛತ್ತೀಸ್ಗಢ ಮೂಲದವರಾಗಿದ್ದು, ಇದೇ ರಾಜ್ಯದ ಅತ್ಯುನ್ನತ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿತ್ತು. ಅಲ್ಲದೆ ಈ ಸಂಬಂಧ ಛತ್ತೀಸ್ಗಢದ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರದಿಯನ್ನೂ ಕೊಟ್ಟಿತ್ತು. ಅದರ ಆಧಾರದಲ್ಲಿ ಇದೀಗ ಬಫೇಲ್ ಸೇರಿ ಆ್ಯಪ್ ಸೃಷ್ಟಿಕರ್ತರಾದ ರವಿ ಉಪ್ಪಲ್, ಸೌರಭ್ ಚಂದ್ರಕರ್, ಶುಭಂ ಸೋನಿ ಮತ್ತು ಅನಿಲ್ ಕುಮಾರ್ ಅಗರವಾಲ್ ವಿವಿಧ 14 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.