ಒಂದು ಸರ್ಕಾರವನ್ನ ಬೀಳಿಸುವಷ್ಟು ಜ್ಯೋತಿರಾದಿತ್ಯ ಸಿಂಧಿಯಾ ಸ್ಟ್ರಾಂಗ್ ನಾ..? ಇವರ ಹಿನ್ನೆಲೆ ಏನು?

First Published Mar 11, 2020, 8:04 PM IST

ಕಾಂಗ್ರೆಸ್‌ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅಷ್ಟು ಬೇಗ ಬಿಜೆಪಿ ಬಾಗಿಲು ತೆರೆದದ್ದು ಹೇಗೆ? ಸಾಮಾನ್ಯವಾಗಿ ಬಿಜೆಪಿ ಬೇರೆ ಪಕ್ಷಗಳಿಂದ ಬರುವ ನಾಯಕರ ಸಂಪೂರ್ಣ ಮೌಲ್ಯಮಾಪನ ಮಾಡದೆ ಸೇರಿಸಿಕೊಳ್ಳುವುದಿಲ್ಲ. ಲಾಭವಾಗುವುದಾದರೆ ಮಾತ್ರ ಹೀಗೆ ಹೊರಗಿನಿಂದ ಬರುವ ನಾಯಕರಿಗೆ ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನ ಸಿಗುತ್ತದೆ. ಆದರೆ ಸಿಂಧಿಯಾ ಕಾಂಗ್ರೆಸ್‌ನಿಂದ ಹೊರಬಂದ ಮರುದಿನವೇ ಬಿಜೆಪಿ ಸದಸ್ಯರಾಗಿದ್ದಾರೆ ಮಾತ್ರವಲ್ಲದೆ ಅವರಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್‌ ಕೂಡ ಸಿಕ್ಕಿದೆ. . ಹಾಗಾದ್ರೆ ಜ್ಯೋತಿರಾದಿತ್ಯ ಸಿಂಧಿಯಾ ಅಷ್ಟೊಂದು ಸ್ಟ್ರಾಂಗ್ ನಾ..? ಯಾರು ಈ ಜ್ಯೋತಿರಾದಿತ್ಯ ಸಿಂಧಿಯಾ? ಇವರ ಹಿನ್ನೆಲೆ ಏನು..?

18 ವರ್ಷ ಸತತವಾಗಿ ಕಾಂಗ್ರೆಸ್ ಗಾಗಿ ದುಡಿದ ಮಧ್ಯಪ್ರದೇಶದ ಸಿಂಧಿಯಾ ರಾಜಮನೆತನದ ಕುಡಿ ಜ್ಯೋತಿರಾದಿತ್ಯ ಸಿಂಧಿಯಾ,
undefined
ಜ್ಯೋತಿರಾದಿತ್ಯ ಸಿಂಧಿಯಾ ಅವರು 1971 ರಲ್ಲಿ ಮುಂಬೈನಲ್ಲಿ ಜನಿಸಿದ್ದಾರೆ
undefined
ಅವರು ಮಧ್ಯಪ್ರದೇಶದ ಗ್ವಾಲಿಯರ್ ಅನ್ನು ಆಳುತ್ತಿದ್ದ ರಾಯಲ್ ಸಿಂಧಿಯಾ ಕುಟುಂಬದಿಂದ ಬಂದವರು. ಅವರ ಪೋಷಕರು ಮಾಧವರಾವ್ ಸಿಂಧಿಯಾ ಮತ್ತು ಮಾಧವಿ ರಾಜೇ ಸಿಂಧಿಯಾ. ಅವರ ಅಜ್ಜ ಗ್ವಾಲಿಯರ್‌ನ ಕೊನೆಯ ಮಹಾರಾಜ ಜಿವಾಜಿರಾವ್ ಸಿಂಧಿಯಾ
undefined
ಹಾರ್ವರ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಪಡೆದಿರುವ ಸಿಂಧಿಯಾ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಮುಗಿಸಿದ್ದಾರೆ.
undefined
ಜ್ಯೋತಿರಾದಿತ್ಯ ಸಿಂಧಿಯಾ ಅವರ ಪತ್ನಿ ಪ್ರಿಯದರ್ಶಿನಿ ರಾಜೆ ಗಾಯಕ್‌ವಾಡ್‌ ಬರೋಡದ ಪ್ರಸಿದ್ಧ ಗಾಯಕ್‌ವಾಡ್‌ ರಾಜಮನೆತನದ ಕುಡಿ.
undefined
2001ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ತಂದೆ ನಿಧನರಾದರು. ಅದೇ ವರ್ಷದಲ್ಲಿ ಸಿಂಧಿಯಾ ಗುನಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದ್ದರು
undefined
ಬಳಿಕ ಜ್ಯೋತಿರಾದಿತ್ಯ ಸಿಂಧಿಯಾ 17 ವರ್ಷಗಳ ಕಾಲ ಕಾಂಗ್ರೆಸ್ ಸಂಸದರಾಗಿದ್ರು.
undefined
ಎರಡು ಬಾರಿ ಕಾಂಗ್ರೆಸ್ ನಿಂದಲೇ ಮಂತ್ರಿಯಾಗಿದ್ದರು. ಕಾಂಗ್ರೆಸ್ ನ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಉತ್ತರಪ್ರದೇಶದ ಚುನಾವಣಾ ಉಸ್ತವಾರಿಯಾಗಿದ್ದರು.
undefined
ಕೊನೆಗೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಸರ್ಕಾರವನ್ನ ಪತನದ ಹಾದಿಯಲ್ಲಿಟ್ಟು ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದರು.
undefined
ರಾಜಮನೆತನದ ಹಿರಿಯ ಸದಸ್ಯೆ ಶುಭಾಂಗಿನಿ ರಾಜೆ ಮೇಲೆ ಪ್ರಧಾನಿ ನರೇಂದ್ರ ಮೋದಿಗೆ ಅಪಾರವಾದ ಗೌರವವಿದೆ. ಈ ಒಂದು ಸಂಪರ್ಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯನ್ನು ಸುಲಭಗೊಳಿಸಿದೆ.
undefined
click me!