ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಪ್ರಧಾನಿ ಮೋದಿಯವರನ್ನ ಭೇಟಿಯಾಗಿ ಮೇಕೆದಾಟು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನ ಚರ್ಚಿಸಿದರು.
undefined
ಖುಷಿಯಿಂದಲೇ ಪ್ರಧಾನಿ ನಿವಾಸದಿಂದ ಹಿಂತಿರುಗಿದ ಬಿಎಸ್ವೈ, ಕರ್ನಾಟಕದ ಭವನದಲ್ಲಿ ರಾಜ್ಯದ ಕೇಂದ್ರ ಸಚಿವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.
undefined
ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಕರ್ನಾಟಕ ಭವನದಲ್ಲಿ ಬಿಎಸ್ವೈ ಅವರನ್ನ ಭೇಟಿ ಮಾಡಿದರು.
undefined
ನವೀಕರಿಸಬಹುದಾದ ಇಂಧನ ಸಚಿವಾಲಯದಲ್ಲಿ ರಾಜ್ಯ ಸಚಿವ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಲ್ಲಿ ರಾಜ್ಯ ಸಚಿವರೂ ಆದ ಭಗವಂತ ಖೂಬಾ ಅವರು ಸಹ ಯಡಿಯೂರಪ್ಪನವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.
undefined
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವರೂ ಆದ ರಾಜೀವ್ ಚಂದ್ರಶೇಖರ್ ಸಹ ಕರ್ನಾಟಕದ ಭವನದಲ್ಲಿ ಬಿಎಸ್ವೈ ಭೇಟಿಯಾಗಿ ಸಮಲೋಚನೆ ನಡೆಸಿದರು.
undefined
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಬಿಎಸ್ವೈ ಭೇಟಿಯಾದರು.
undefined