ಬೆಂಗ್ಳೂರು ರೆಸಾರ್ಟ್‌ನಿಂದಲೇ ದಿಲ್ಲಿಗೆ ಪ್ರಯಾಣ, ನವಜೋಡಿಗೆ ಶುಭ ಹಾರೈಸಿದ ಸಿದ್ದರಾಮಯ್ಯ

First Published Feb 28, 2021, 6:57 PM IST

ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಿರುವುದರಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಗೆ ತೆರಳಿದ್ದಾರೆ. ಅದಕ್ಕೂ ಮೊದಲ ಸಿದ್ದರಾಮಯ್ಯ ಅವರು ರೆಸಾರ್ಟ್‌ನಲ್ಲಿ ತಂಗಿದ್ದರು. ಬಳಿಕ ಅಲ್ಲಿಂದಲೇ ದಿಲ್ಲಿಗೆ ಹೋಗಿ ಸಪ್ತಪದಿ ತುಳಿದ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಪುತ್ರ ಅರ್ಜುನ್ ಮತ್ತು ಐಶ್ವರ್ಯ ವಿವಾಹ ಇಂದು (ಭಾನುವಾರ) ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು.
undefined
ವಿವಾಹದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿದರು.
undefined
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಮದುಗೆ ಬಂದಿದ್ದೇನೆ, ಯಾವುದೇ ನಾಯಕರನ್ನ ಇವತ್ತು ಭೇಟಿ ಮಾಡೋದಿಲ್ಲ. ಹಾಗೇ ಮೈಸೂರು ಪಾಲಿಕೆ ಚುನಾವಣೆ ವಿಚಾರದ ಬಗ್ಗೆಯೂ ಪಾರ್ಟಿಯ ಒಳಗಡೆ ಮಾತನಾಡುತ್ತೇನೆ, ಇಲ್ಲೆಲ್ಲ ಮಾತಾಡಲ್ಲ ಎಂದು ಹೇಳಿದರು.
undefined
ಮೈಸೂರು ಮೇಯರ್ ಚುನಾವಣೆಯಲ್ಲಿ ತಮಗೆ ಉಂಟಾಗಿರುವ ಹಿನ್ನೆಡೆ ಬಗ್ಗೆ ಹಾಗೂ ತಮ್ಮ ಹಿಂದ ಸಮಾವೇಶ ಮಾಡುವ ಬಗ್ಗೆಯೂ ಹೈಕಮಾಂಡ್ ಗಮನಕ್ಕೆ ತರುತ್ತಾರೆ ಅಂತಾ ಹೇಳಲಾಗಿತ್ತು. ಆದರೆ ಇಂದು ಯಾವುದೇ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲ್ಲ ಅಂತಾ ಸಿದ್ದರಾಮಯ್ಯ ಹೇಳಿರೋದು ಕುತೂಹಲ ಮೂಡಿಸಿದೆ.
undefined
ಮೈಸೂರು ಪಾಲಿಕೆ ಕೈತಪ್ಪಿದ್ದರಿಂದ ಸಿದ್ದರಾಮಯ್ಯ ಅವರು ರೆಸಾರ್ಟ್‌ಗೆ ತೆರಳಿದ್ದರು. ಬಳಿಕ ಅಲ್ಲಿಂದ ಇಂದು (ಭಾನುವಾರ) ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
undefined
click me!