Published : May 10, 2023, 09:53 AM ISTUpdated : May 10, 2023, 05:21 PM IST
ಬೆಂಗಳೂರು (ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾನ ಪ್ರಭುಗಳು ಬೆಳಗ್ಗಿನಿಂದಲೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ. ಹೊರದೇಶದಲ್ಲಿರುವ ಕೆಲವರು ತಮ್ಮೂರಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದಲ್ಲದೆ ವಿಶೇಷಚೇತನರು, ವೃದ್ದರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು.
ಧರ್ಮಸ್ಥಳದಲ್ಲಿ ಮದುವೆಯಾಗಿ ಬಂದು ನೇರವಾಗಿ ಮತಗಟ್ಟೆಗೆ ಬಂದ ಮದುಮಗ. ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85 ರಲ್ಲಿ ಹಕ್ಕು ಚಲಾವಣೆ ಮಾಡಿದ ರೋಹಿತ್. ರೋಹಿತ್ ಸಕಲೇಶಪುರದ, ಮಹೇಶ್ವರಿ ನಗರದ ನಿವಾಸಿ ಇಂದು ಧರ್ಮಸ್ಥಳದಲ್ಲಿ ನಂದಿನಿ ಜೊತೆ ವಿವಾಹವಾಗಿ ಸಕಲೇಶಪುರಕ್ಕೆ ಬಂದು ಮತ ಚಲಾವಣೆ ಮಾಡಿದ್ದಾರೆ.
212
ರಾಜ್ಯ ವಿಧಾನಸಭೆ ಮತದಾನ ಹಿನ್ನೆಲೆ ಧಾರವಾಡದಲ್ಲಿ ಮೊದಲ ಮತದಾನ ಮಾಡಿದ ನಂತರ ಸೆಲ್ಫಿ ತೆಗೆದುಕೊಂಡು ಯುವತಿಯರು ಖುಷಿಪಟ್ಟರು.
312
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಮಾಕೋನಹಳ್ಳಿ ಮತಗಟ್ಟೆಗೆ ಬಂದು ಮದುಮಗಳು ಮದುವೆಗೆ ಮುನ್ನ ತಮ್ಮ ಹಕ್ಕು ಚಲಾಯಿಸಿದರು.
412
ಚುನಾವಣೆಯಲ್ಲಿ ಮತದಾನಕ್ಕೋಸ್ಕರ ದೂರದ ಅಮೇರಿಕಾದಿಂದ ಆಗಮಿಸಿದ ಶಿರಸಿಯ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಮತದಾನ ಮಾಡಿ ಕಾನಗೋಡ ಮತಗಟ್ಟೆ ಮೂಲಕ ಹಕ್ಕು ಚಲಾಯಿಸಿದರು.
512
ಪಾರ್ಸಿಯಿಂದ ಬಳಲುತ್ತಿರುವ ಕೊಪ್ಪಳ ಜಿಲ್ಲೆಯ ಕುಕನೂರಿನ ಅನ್ವರ್ ಸಾಬ್ ಅನಾರೋಗ್ಯ ಮಧ್ಯೆಯೂ ಆಟೋದಲ್ಲಿ ಬಂದು ಮತದಾನ ಮಾಡಿದರು.
612
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರು ಮತಗಟ್ಟೆಗೆ ಬಂದು ಮತದಾನ ಮಾಡಿದರು.
712
election
ಕೋಲಾರದಲ್ಲಿ 93 ವರ್ಷದ ವೃದ್ಧೆ ಮಾತದಾನ ಮಾಡಿದ್ದಾರೆ. ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬೂತ್ ನಲ್ಲಿ ಮತದಾನ. ಸುಬ್ಬಲಕ್ಷ್ಮಮ್ಮ ಮತದಾನ ಮಾಡಿರುವ ವೃದ್ಧೆ. ಮತಗಟ್ಟೆ ಸಂಖ್ಯೆ 135 ರಲ್ಲಿ ಮತದಾನ.
812
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ತನ್ನ ಪ್ರಥಮ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದ ಯುವತಿ. ದಿಶಾ ಹರಿಕಂತ್ರ ಪ್ರಥಮ ಮತದಾನ ಮಾಡಿದ ಯುವತಿ.
912
ಚಿಕ್ಕಮಗಳೂರಿನ ಸಿ.ಟಿ.ರವಿ ಬೂತ್ ನಲ್ಲಿ ಮೊದಲ ಮತದಾನ. 80 ವರ್ಷದ ವೃದ್ಧೆ ಕಣ್ಣಮ್ಮರಿಂದ ಮತದಾನ. ಈಕೆ ನಗರದಲ್ಲಿ ತರಕಾರಿ ಮಾರುವ ವೃದ್ಧೆ. ಅಜ್ಜಿಯ ಮತದಾನದ ಉತ್ಸವಕ್ಕೆ ಅಧಿಕಾರಿಗಳು ಫಿದಾ
1012
ಬಳ್ಳಾರಿಯಲ್ಲಿ ಕಂಪ್ಲಿಯಲ್ಲಿ 103 ವರ್ಷದ ಅಜ್ಜಿ ಮತದಾನ ಮಾಡಿದ್ದಾರೆ. ಮನೆಯಲ್ಲಿ ಕುಳಿತು ಮತದಾನ ಮಾಡಲು ಅವಕಾಶ ಇದ್ರೂ. ನಾನು ಗಟ್ಡಿಮುಟ್ಟಾಗಿದ್ದೇನೆ. ಹೀಗಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇನೆಂದು ಅಜ್ಜಿ ಹೇಳಿದ್ದು, ಮತದಾನ ಮಾಡಲು ನಿರ್ಲಕ್ಷ್ಯ ಮಾಡೋರಿಗೆ ಮಾದರಿಯಾಗಿದ್ದಾರೆ.
1112
ಚುನಾವಣೆ ಹಿನ್ನೆಲೆ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಲು ಸಾಲು ಗಟ್ಟಿ ನಿಂತಿರುವ ಮಹಿಳೆಯರು
1212
ballari
ಎರಡು ಕೈ ಇಲ್ಲದ ದಿವ್ಯಾಂಗ ನಿಂದ ಮತದಾನ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮತಗಟ್ಟೆಯಲ್ಲಿ ಮುಸ್ತಫಾ ಅವರಿಂದ ಮತದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.