ಉಡುಪಿ (ಮಾ.14): ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ 1,20,000 ಕೋಟಿ ರು.ಗಳನ್ನು ತೆಗೆದಿರಿಸಿದೆ. ರೀ ವಿಜಯೇಂದ್ರ, ಬೊಮ್ಮಯಿ, ಅಶೋಕ್, ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಯಾಕ್ ಸುಳ್ ಹೇಳ್ತೀರಿ, ಬರ್ರಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಉಡುಪಿ ಗ್ಯಾರಂಟಿ ಸಮಾವೇಶದಲ್ಲಿ ಸವಾಲು ಹಾಕಿದರು.