ಅದಕ್ಕೆ ನಮ್ಮ ವಿಮಾನ ಅಲ್ಲಿ ಇಳಿಸಿ ಹೋಗಲು ಅನುಕೂಲ ಎಂದು ಮೋದಿ ಹೇಳಿದರು. ಬಂದು ಹೋಗ್ಲಿ, ಹಂಗೇ ಬರುವಾಗ ನಮಗ ಯೋಜನೆಗಳ ಕೊಡುಗೆ ಕೊಡಬಹುದಲ್ಲ? ಎಂದರು. ಮಾತಿನುದ್ದಕ್ಕೂ ಸಿಂಹಪಾಲು ಮೋದಿಯ ಮಾತು, ಡೈಲಾಗ್ ಎಲ್ಲವನ್ನು ಅಣಕಿಸುತ್ತ , ಹಲವು ಬಾರಿ ಏಕ ವಚನದಲ್ಲೇ ಪದಪ್ರಯೋಗ ಮಾಡುತ್ತ ಮಾತನಾಡಿದ ಖರ್ಗೆ, ಕಾಂಗ್ರೆಸ್ ದೇಶವನ್ನೇ ಹಾಳು ಮಾಡಿದೆ ಅಂತಾನ, ನೀ ಎಷ್ಟು ಬೈತಿ ಬಯ್ಯೋ ಮಾರಾಯ, ನಿನ್ನ ಬೈಗುಳ ತಿಂತೀವಿ, ನೀನರ ಕೆಲ್ಸ ಮಾಡಿ ತೋರಿಸು, ಕೆಲಸಕ್ಕಿಂತ ಪ್ರಚಾರನೇ ಹೆಚ್ಚಾಯ್ತು ಎಂದು ಕೇಂದ್ರದ ಸಾಧನೆ ಶೂನ್ಯವೆಂದು ಟೀಕಿಸಿದರು.