ಬಿಎಸ್‌ವೈ ಕಾಲಿಗೆ, ವಿಧಾನಸಭೆ ಮೆಟ್ಟಿಲಿಗೆ ನೂತನ ಶಾಸಕ ದೀರ್ಘದಂಡ ನಮಸ್ಕಾರ

Published : Jun 08, 2021, 08:01 PM ISTUpdated : Jun 08, 2021, 08:49 PM IST

 ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ಕೆಯಾದ ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು (ಮಂಗಳವಾರ) ನಡೆಯಿತು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಶರಣು ಸಲಗಾರ್ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಸವನಗೌಡ ತುರುವಿಹಾಳ್ ಅವರಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಸ್ಪೀಕರ್ ಕಾಗೇರಿ ಪ್ರಮಾಣವಚನ ಬೋಧಿಸಿದರು. ಆದ್ರೆ, ಅದಕ್ಕೂ ಮೊದಲು ನೂತನ ಶಾಸಕರೊಬ್ಬರು ಸಿಎಂ ಬಿಎಸ್‌ವೈ ಕಾಲಿಗೆ ಹಾಗೂ ವಿಧಾನಸಭೆ ಮೆಟ್ಟಿಲಿಗೆ ದೀರ್ಘದಂಡ ನಮಸ್ಕಾರ ಮಾಡಿ ಗಮನಸೆಳೆದರು.

PREV
16
ಬಿಎಸ್‌ವೈ ಕಾಲಿಗೆ, ವಿಧಾನಸಭೆ ಮೆಟ್ಟಿಲಿಗೆ ನೂತನ ಶಾಸಕ ದೀರ್ಘದಂಡ ನಮಸ್ಕಾರ

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಇಬ್ಬರು ನೂತನ ಶಾಸಕರು ಇಂದು (ಮಂಗಳವಾರ) ಪ್ರಮಾಣವಚನ ಸ್ವೀಕರಿಸಿದರು.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಇಬ್ಬರು ನೂತನ ಶಾಸಕರು ಇಂದು (ಮಂಗಳವಾರ) ಪ್ರಮಾಣವಚನ ಸ್ವೀಕರಿಸಿದರು.

26

 ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಶರಣು ಸಲಗಾರ್ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

 ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಶರಣು ಸಲಗಾರ್ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

36

ಇನ್ನು ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದರು.

ಇನ್ನು ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದರು.

46

ಅದಕ್ಕೂ ಮೊದಲು ಶರಣು ಸಲಗಾರ್ ಅವರು ಮೊದಲ ಬಾರಿಗೆ ಶಾಸಕರಾಗಿ ಅಯ್ಕೆಯಾಗಿದ್ದರಿಂದ ವಿಧಾನಸಭೆ ಮೆಟ್ಟಿಗೆ ದೀರ್ಘದಂಡ ನಮಸ್ಕಾರ ಮಾಡಿ ಗಮನಸೆಳೆದರು.

ಅದಕ್ಕೂ ಮೊದಲು ಶರಣು ಸಲಗಾರ್ ಅವರು ಮೊದಲ ಬಾರಿಗೆ ಶಾಸಕರಾಗಿ ಅಯ್ಕೆಯಾಗಿದ್ದರಿಂದ ವಿಧಾನಸಭೆ ಮೆಟ್ಟಿಗೆ ದೀರ್ಘದಂಡ ನಮಸ್ಕಾರ ಮಾಡಿ ಗಮನಸೆಳೆದರು.

56

ಇನ್ನೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಸವನಗೌಡ ತುರುವಿಹಾಳ್ ಅವರೂ ಸಹ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನೂ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಸವನಗೌಡ ತುರುವಿಹಾಳ್ ಅವರೂ ಸಹ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

66

ಅತ್ತ ಬಿಜೆಪಿ ನೂತನ ಶಾಸಕ ಬಿಎಸ್‌ವೈ ಕಾಲಿಗೆ ದೀರ್ಘದಂಡ ನಮಸ್ಕಾರ ಹಾಕಿದ್ರೆ, ಇತ್ತ ಕಾಂಗ್ರೆಸ್ ನೂತನ ಶಾಸಕ ಬಸನಗೌಡ ತುರ್ವಿಹಾಳ್ ಅವರು ತಮ್ಮ ಮಸ್ಕಿ ಕ್ಷೇತ್ರದ ಮಹತ್ವದ ಬೇಡಿಕೆಯಾದ ಎನ್.ಆರ್.ಬಿ.ಸಿ 5ಎ ನಾಲಾ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ತಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆಮನವಿ ಪತ್ರ ಸಲ್ಲಿಸಿದರು.

ಅತ್ತ ಬಿಜೆಪಿ ನೂತನ ಶಾಸಕ ಬಿಎಸ್‌ವೈ ಕಾಲಿಗೆ ದೀರ್ಘದಂಡ ನಮಸ್ಕಾರ ಹಾಕಿದ್ರೆ, ಇತ್ತ ಕಾಂಗ್ರೆಸ್ ನೂತನ ಶಾಸಕ ಬಸನಗೌಡ ತುರ್ವಿಹಾಳ್ ಅವರು ತಮ್ಮ ಮಸ್ಕಿ ಕ್ಷೇತ್ರದ ಮಹತ್ವದ ಬೇಡಿಕೆಯಾದ ಎನ್.ಆರ್.ಬಿ.ಸಿ 5ಎ ನಾಲಾ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ತಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆಮನವಿ ಪತ್ರ ಸಲ್ಲಿಸಿದರು.

click me!

Recommended Stories