ಬೆಳಗಾವಿ (ಮಾ.02): ರಾಜ್ಯ ಸರ್ಕಾರದಿಂದ ಜಾತಿ ಗಣತಿ ವರದಿ ಸ್ವೀಕಾರ ಮಾಡುವುದು ಬೇರೆ. ಅದನ್ನು ಒಪ್ಪುವುದು ಬೇರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಾತಿ ಗಣತಿ ವರದಿ ಸ್ವೀಕಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವರದಿ ಸ್ವೀಕಾರ ಮಾಡಿಕೊಂಡರೆ ಅದನ್ನು ಒಪ್ಪಿದ ಹಾಗಲ್ಲ. ಪ್ರಕ್ರಿಯೆ ಹಂತ, ಹಂತವಾಗಿ ಹೋಗಬೇಕು. ಕಾಂತರಾಜು ವರದಿ ಕೊಟ್ಟಿದ್ದರು.