ಇದೇ ವೇಳೆ ಇತರ ಗಣ್ಯ ವ್ಯಕ್ತಿಗಳಿಗೂ ಮನವಿ ಮಾಡಿದ ಯತೀಂದ್ರ ಅವರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯೊಳಗೆ ಬಂದರೆ ಯಾರಿಗೂ ತೊಂದರೆಯಾಗುವುದಿಲ್ಲ. ಜನಸಾಮಾನ್ಯರಿಗೆ ತೊಂದರೆ ಕೊಡದೆ ದರ್ಶನ ಪಡೆಯುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.
ತಮ್ಮ ಅಧಿಕಾರ ಅಥವಾ ಪ್ರಭಾವವನ್ನು ಬಳಸದೆ, ಸಾಮಾನ್ಯ ಭಕ್ತರಂತೆ ನಿಯಮಕ್ಕೆ ತಲೆಬಾಗಿದ ಯತೀಂದ್ರ ಸಿದ್ದರಾಮಯ್ಯ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.