ಅಂಕಲಿಮಠಕ್ಕೆ ಸಿದ್ದರಾಮಯ್ಯ ಭೇಟಿ: ಅಡವೀಶ ನಿರುಪಾಧೀಶ್ವರರ ಗದ್ದುಗೆ ದರ್ಶನ ಪಡೆದ ಮಾಜಿ ಸಿಎಂ

First Published Dec 24, 2020, 8:18 AM IST

ಮುದಗಲ್‌(ಡಿ.24): ಸಮೀಪದ ಸುಕ್ಷೇತ್ರ ಅಂಕಲಿಮಠದ ಪೀಠಾಧಿಪತಿ ವೀರಭದ್ರಸ್ವಾಮಿಗಳ ಸುಪುತ್ರ ಬಸವರಾಜ ಸ್ವಾಮಿ ಅವರ ವಿವಾಹ ಕಾರ್ಯಕ್ರಮದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಂಕಲಿಮಠಕ್ಕೆ ಬುಧವಾರ ಭೇಟಿ ನೀಡಿ ಸದ್ಗುರು ಅಡವೀಶ ನಿರುಪಾಧೀಶ್ವರರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. 

ಸುಕ್ಷೇತ್ರ ಅಂಕಲಿಮಠದ ಬಳಿ ನಿರ್ಮಿಸಿದ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
undefined
ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಬರಮಾಡಿಕೊಂಡ ಸ್ಥಳೀಯ ಶಾಸಕ ಡಿ.ಎಸ್‌. ಹೂಲಗೇರಿ ಹಾಗೂ ಕಾಂಗ್ರೆಸ್‌ ಮುಖಂಡರು
undefined
ಸದ್ಗುರು ಅಡವೀಶ ನಿರುಪಾಧೀಶ್ವರರ ಗದ್ದುಗೆ ದರ್ಶನ ಪಡೆದು, ಶ್ರೀಮಠದ ಹಿರಿಯ ಪೀಠಾಧಿಪತಿ ವೀರಭದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಸಿದ್ದರಾಮಯ್ಯ
undefined
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್‌. ಹೂಲಗೇರಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ನಾಯಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾವೂದ್‌ಸಾಬ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗನಗೌಡ ತುರಡಗಿ, ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ, ಡಾ. ಅಯ್ಯಪ್ಪ ಬನ್ನಿಗೋಳ, ಪುರಸಭೆ ಉಪಾಧ್ಯಕ್ಷ ಶಿವನಾಗಪ್ಪ, ಅಮರಗುಂಡಪ್ಪ ಮೇಟಿ, ಮುದಗಲ್‌ ಪುರಸಭೆ ಸದಸ್ಯ ಎಸ್‌.ಆರ್‌. ರಸೂಲ, ಮಹಾಂತೇಶ ಪಾಟೀಲ, ಸುರೇಂದ್ರಗೌಡ ಹಾಗೂ ಪುರಸಭೆ ಸದಸ್ಯರು ಇದ್ದರು.
undefined
click me!