ರಾಯಚೂರು: ದ್ವೀಪದಲ್ಲಿ ಸಿಲುಕಿದವರ ಪರದಾಟ, ಡ್ರೋನ್ ಮೂಲಕ ಔಷಧಿ, ಅಗತ್ಯ ಸಾಮಗ್ರಿಗಳ ಪೂರೈಕೆ

First Published Aug 21, 2020, 10:18 AM IST

ರಾಯಚೂರು(ಆ.21): ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಜಿಲ್ಲೆಯ ಜಿಲ್ಲೆ ಲಿಂಗಸೂಗೂರು ತಾಲೂಕಿನ ಕರಕಲಗಡ್ಡಿ ನಡುಗಡ್ಡೆಯಲ್ಕಿ ನಾಲ್ವರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಸುವರ್ಣ ನ್ಯೂಸ್‌ ವರದಿಯನ್ನ ಪ್ರಸಾರ ಮಾಡಿತ್ತು. ‌ವರದಿ ಬಳಿಕ ಎನ್‌ಡಿಆರ್‌ಎಫ್ ತಂಡ ನಿನ್ನೆ(ಗುರುವಾರ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ನದಿಯಲ್ಲಿ ನೀರು ರಭಸವಾಗಿ ಹರಿಯುವುದರಿಂದ ನಾಲ್ವರ ರಕ್ಷಣೆಗೆ ಬೋಟ್ ಬಳಸಲು ಅಸಾಧ್ಯ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಹಿಂದೇಟು
undefined
ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧಿ ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಹೀಗಾಗಿ ಇಂದು ಈ ವಿನೂತನ ಪ್ರಯೋಗವನ್ನ ನಡೆಸಲು ಮುಂದಾಗಿದೆ.
undefined
ರಾಯಚೂರು ಕೃಷಿ ವಿಶ್ವವಿದ್ಯಾಲಯ ತಯಾರಿಸಿದ ಎರಡು ಡ್ರೋನ್‌ಗಳನ್ನ ಬಳಸಲು‌ ಜಿಲ್ಲಾಡಳಿತ ‌ಚಿಂತನೆ ನಡೆಸಿದೆ
undefined
5 ಕೆಜಿ ಭಾರದ ವಸ್ತುಗಳನ್ನ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವ ಡ್ರೋನ್‌ಗಳನ್ನ ಬಳಸಲು ಎನ್‌ಡಿಆರ್ ಎಫ್ ನೇತೃತ್ವದ ತಂಡ ಕರಕಲಗಡ್ಡಿ ಬಳಿ ಕಾರ್ಯಾಚರಣೆ ನಡೆಸಲಿದೆ.
undefined
click me!