ಕಷ್ಟಪಟ್ಟು ಬೆಳೆದ ಪಪ್ಪಾಯಿಗೆ ಬೆಲೆಯೇ ಇಲ್ಲ..!

Kannadaprabha News   | Asianet News
Published : Apr 22, 2020, 03:10 PM ISTUpdated : Apr 22, 2020, 03:23 PM IST

ಅಡ್ಕತಿಮಾರು ಗೋಪಾಲಕೃಷ್ಣ ಭಟ್‌ ತಾವು ಬೆಳೆದ ಪಪ್ಪಾಯಿಗೆ ಬೆಲೆ ದೊರಕದೆ ಅವರು ಈ ತನಕ ಸುಮಾರು 10 ಲಕ್ಷ ರು. ಮೌಲ್ಯದ 30 ಟನ್‌ ಫಸಲು ಕಳೆದುಕೊಂಡಿದ್ದಾರೆ.

PREV
19
ಕಷ್ಟಪಟ್ಟು ಬೆಳೆದ ಪಪ್ಪಾಯಿಗೆ ಬೆಲೆಯೇ ಇಲ್ಲ..!

ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಪೈವಳಿಕೆಯ ನಿವಾಸಿ, ಕನ್ನಡಿಗ ಅಡ್ಕತಿಮಾರು ಗೋಪಾಲಕೃಷ್ಣ ಭಟ್‌ ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಬೆಳೆಗೆ ಬೆಲೆ ಕಳೆದುಕೊಂಡು ತಾವು ಬೆಳೆದ ಲಕ್ಷಾಂತರ ರು.ಮೌಲ್ಯದ ಥೈವಾನ್‌ ರೆಡ್‌ ಲೇಡಿ ಪಪ್ಪಾಯಿ ಬೆಳೆಗೆ ನೀರುಣಿಸುವುದನ್ನೇ ನಿಲ್ಲಿಸಿದ್ದಾರೆ.

ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಪೈವಳಿಕೆಯ ನಿವಾಸಿ, ಕನ್ನಡಿಗ ಅಡ್ಕತಿಮಾರು ಗೋಪಾಲಕೃಷ್ಣ ಭಟ್‌ ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಬೆಳೆಗೆ ಬೆಲೆ ಕಳೆದುಕೊಂಡು ತಾವು ಬೆಳೆದ ಲಕ್ಷಾಂತರ ರು.ಮೌಲ್ಯದ ಥೈವಾನ್‌ ರೆಡ್‌ ಲೇಡಿ ಪಪ್ಪಾಯಿ ಬೆಳೆಗೆ ನೀರುಣಿಸುವುದನ್ನೇ ನಿಲ್ಲಿಸಿದ್ದಾರೆ.

29

ಲಾಕ್‌ಡೌನ್‌ ಅವಧಿಯಲ್ಲಿ ಪಪ್ಪಾಯಿ ಸಾಗಾಟ ಸಮಸ್ಯೆಯಿಲ್ಲ, ಪೊಲೀಸರ ಕಿರಿಕಿರಿಯೂ ಇಲ್ಲ. ಆದರೆ ಸರಾಸರಿ ಕೆ.ಜಿ.ಗೆ 32 ರು.ಗೆ ಮಾರಾಟವಾಗುತ್ತಿದ್ದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ವರ್ತಕರು 15 ರು.ಗಳಿಗಿಂತ ಜಾಸ್ತಿ ನೀಡಲು ಸಿದ್ಧರಿಲ್ಲ.

ಲಾಕ್‌ಡೌನ್‌ ಅವಧಿಯಲ್ಲಿ ಪಪ್ಪಾಯಿ ಸಾಗಾಟ ಸಮಸ್ಯೆಯಿಲ್ಲ, ಪೊಲೀಸರ ಕಿರಿಕಿರಿಯೂ ಇಲ್ಲ. ಆದರೆ ಸರಾಸರಿ ಕೆ.ಜಿ.ಗೆ 32 ರು.ಗೆ ಮಾರಾಟವಾಗುತ್ತಿದ್ದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ವರ್ತಕರು 15 ರು.ಗಳಿಗಿಂತ ಜಾಸ್ತಿ ನೀಡಲು ಸಿದ್ಧರಿಲ್ಲ.

39

ಸರಿಯಾಗಿ ಹಣವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕೇರಳ ಕೃಷಿ ಇಲಾಖೆಯವರಿಗೆ ಮಾಡಿದ ಮನವಿಗಳಿಗೆ ಬೆಲೆಯೇ ಇಲ್ಲ ಎನ್ನುತ್ತಾರೆ ಗೋಪಾಲ ಕೃಷ್ಣ ಭಟ್

ಸರಿಯಾಗಿ ಹಣವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕೇರಳ ಕೃಷಿ ಇಲಾಖೆಯವರಿಗೆ ಮಾಡಿದ ಮನವಿಗಳಿಗೆ ಬೆಲೆಯೇ ಇಲ್ಲ ಎನ್ನುತ್ತಾರೆ ಗೋಪಾಲ ಕೃಷ್ಣ ಭಟ್

49

Papaya

Papaya

59

ಪೈವಳಿಕೆ, ಮಂಜೇಶ್ವರ, ಸೀತಾಂಗೋಳಿ, ಬಂದ್ಯೋಡು ಮತ್ತಿತರ ಕಡೆಗಳಿಗೆ ಲೈನ್‌ ಸೇಲ್‌ ಮಾಡಿ ಅವರೇ ಹಣ್ಣುಗಳನ್ನು ಅಂಗಡಿಗಳಿಗೆ ಪೂರೈಸುತ್ತಿದ್ದರು.

ಪೈವಳಿಕೆ, ಮಂಜೇಶ್ವರ, ಸೀತಾಂಗೋಳಿ, ಬಂದ್ಯೋಡು ಮತ್ತಿತರ ಕಡೆಗಳಿಗೆ ಲೈನ್‌ ಸೇಲ್‌ ಮಾಡಿ ಅವರೇ ಹಣ್ಣುಗಳನ್ನು ಅಂಗಡಿಗಳಿಗೆ ಪೂರೈಸುತ್ತಿದ್ದರು.

69

ಇತ್ತೀಚೆಗೆ ಬೆಳೆ ಮಾರಾಟಕ್ಕೆ ತಾನು ಕೃಷಿ ಭವನವನ್ನು ಸಂಪರ್ಕಿಸಿದಾಗ, ಪೈವಳಿಕೆ ಕೃಷಿ ಇಲಾಖೆ ಅಧಿಕಾರಿಗಳೇ ‘ಪಪ್ಪಾಯಿಗೆ ರೇಟಿಲ್ಲ, ಕೆ.ಜಿ.ಗೆ 15 ರು. ಮಾತ್ರ ಬೆಲೆ’ ಎಂದು ತಪ್ಪು ಮಾಹಿತಿ ಹರಡಿದ್ದರಿಂದಲೇ ತನಗೆ ಬೆಲೆ ದೊರಕುತ್ತಿಲ್ಲ ಎನ್ನುವುದು ಇವರ ಅಳಲು

ಇತ್ತೀಚೆಗೆ ಬೆಳೆ ಮಾರಾಟಕ್ಕೆ ತಾನು ಕೃಷಿ ಭವನವನ್ನು ಸಂಪರ್ಕಿಸಿದಾಗ, ಪೈವಳಿಕೆ ಕೃಷಿ ಇಲಾಖೆ ಅಧಿಕಾರಿಗಳೇ ‘ಪಪ್ಪಾಯಿಗೆ ರೇಟಿಲ್ಲ, ಕೆ.ಜಿ.ಗೆ 15 ರು. ಮಾತ್ರ ಬೆಲೆ’ ಎಂದು ತಪ್ಪು ಮಾಹಿತಿ ಹರಡಿದ್ದರಿಂದಲೇ ತನಗೆ ಬೆಲೆ ದೊರಕುತ್ತಿಲ್ಲ ಎನ್ನುವುದು ಇವರ ಅಳಲು

79

ಸುಮಾರು 1700 ಪಪ್ಪಾಯಿ ಹಣ್ಣುಗಳು ಮಾರುಕಟ್ಟೆಯಿಲ್ಲದೆ ಹಾಳಾಗುತ್ತಿದೆ, ಇದಕ್ಕೆ ಕೃಷಿ ಇಲಾಖೆ ತಪ್ಪು ಮಾಹಿತಿ ಕಾರಣ ಎಂದು ಅವರು ನೇರವಾಗಿ ಆರೋಪಿಸುತ್ತಾರೆ.

ಸುಮಾರು 1700 ಪಪ್ಪಾಯಿ ಹಣ್ಣುಗಳು ಮಾರುಕಟ್ಟೆಯಿಲ್ಲದೆ ಹಾಳಾಗುತ್ತಿದೆ, ಇದಕ್ಕೆ ಕೃಷಿ ಇಲಾಖೆ ತಪ್ಪು ಮಾಹಿತಿ ಕಾರಣ ಎಂದು ಅವರು ನೇರವಾಗಿ ಆರೋಪಿಸುತ್ತಾರೆ.

89

ಬೆಲೆ ದೊರಕದೆ ಅವರು ಈ ತನಕ ಸುಮಾರು 10 ಲಕ್ಷ ರು. ಮೌಲ್ಯದ 30 ಟನ್‌ ಫಸಲು ಕಳೆದುಕೊಂಡಿದ್ದಾರೆ.ಈ ನಡುವೆ ಉಪ್ಪಳ, ಮಂಜೇಶ್ವರ ಭಾಗದ ಪೊಲೀಸರು, ಅಧಿಕಾರಿಗಳ ಸಹಿತ ಕೊರೋನಾ ವಾರಿಯರ್ಸ್‌ಗೆ ಸುಮಾರು 10 ಕ್ವಿಂಟಾಲ್‌ನಷ್ಟುಪಪ್ಪಾಯಿ ಹಣ್ಣುಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಬೆಲೆ ದೊರಕದೆ ಅವರು ಈ ತನಕ ಸುಮಾರು 10 ಲಕ್ಷ ರು. ಮೌಲ್ಯದ 30 ಟನ್‌ ಫಸಲು ಕಳೆದುಕೊಂಡಿದ್ದಾರೆ.ಈ ನಡುವೆ ಉಪ್ಪಳ, ಮಂಜೇಶ್ವರ ಭಾಗದ ಪೊಲೀಸರು, ಅಧಿಕಾರಿಗಳ ಸಹಿತ ಕೊರೋನಾ ವಾರಿಯರ್ಸ್‌ಗೆ ಸುಮಾರು 10 ಕ್ವಿಂಟಾಲ್‌ನಷ್ಟುಪಪ್ಪಾಯಿ ಹಣ್ಣುಗಳನ್ನು ಉಚಿತವಾಗಿ ವಿತರಿಸಿದ್ದಾರೆ.

99

ಸಮಸ್ಯೆ ಕುರಿತು ಕೃಷಿ ಭವನ ಹಾಗೂ ಸ್ವತಃ ಕೃಷಿ ಸಚಿವರ ಆಪ್ತ ಸಹಾಯಕರಿಗೆ ಸಂದೇಶ ಕಳುಹಿಸಿದರೂ ಖರೀದಿಗೆ ವ್ಯವಸ್ಥೆ ಆಗಿಲ್ಲ. ಆಸಕ್ತ ಖರೀದಿದಾರರು ಬಂದರೆ ತಾನು ಮನೆಯಿಂದಲೇ ಕೆ.ಜಿ.ಗೆ 25-28 ರು.ಗೆ ಮಾರಲು ಸಿದ್ಧ ಎನ್ನುತ್ತಾರೆ.

ಸಮಸ್ಯೆ ಕುರಿತು ಕೃಷಿ ಭವನ ಹಾಗೂ ಸ್ವತಃ ಕೃಷಿ ಸಚಿವರ ಆಪ್ತ ಸಹಾಯಕರಿಗೆ ಸಂದೇಶ ಕಳುಹಿಸಿದರೂ ಖರೀದಿಗೆ ವ್ಯವಸ್ಥೆ ಆಗಿಲ್ಲ. ಆಸಕ್ತ ಖರೀದಿದಾರರು ಬಂದರೆ ತಾನು ಮನೆಯಿಂದಲೇ ಕೆ.ಜಿ.ಗೆ 25-28 ರು.ಗೆ ಮಾರಲು ಸಿದ್ಧ ಎನ್ನುತ್ತಾರೆ.

click me!

Recommended Stories