ಬಾಗಲಕೋಟೆ(ಏ.24): ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಗ್ರಾಮಸ್ಥರು ಶ್ರೀ ಲಕ್ಷ್ಮೀ ದೇವಿಗೆ ಮೊರೆ ಹೋದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಿರಿಯ ಮುಖಂಡರು 5 ವಾರಗಳ ಹರಕೆ ಹೊತ್ತಿದ್ದು, ಹಿರಿಯರಿಂದ ದೀರ್ಘದಂಡ ನಮಸ್ಕಾರ ಸೇವೆ ಮಾಡುತ್ತಿದ್ದಾರೆ. ಇಬ್ಬರೂ ಹಿರಿಯರು ಒಂದೂವರೆ ಕಿಲೋಮೀಟರ್ ದೀರ್ಘ ದಂಡ ಸೇವೆ ಸಲ್ಲಿಸಿದ್ದಾರೆ.