ಕಲ್ಲಂಗಡಿ ಹಣ್ಣಲ್ಲಿ ಮೂಡಿದ ಮೋದಿ, ಅಭಿನಂದನ್, ಹೂಗಳಲ್ಲಿ ಅರಳಿದ ಅಕ್ಟೋಪಸ್

First Published Mar 3, 2020, 10:33 AM IST

ಉಡುಪಿಯಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳ ಅಕ್ಟೋಪಸ್ ಗಮನ ಸೆಳೆದಿದೆ. ಕಲ್ಲಂಗಡಿ ಹಣ್ಣಲ್ಲಿ ಅಭಿನಂದನ್, ಮೋದಿ, ಪಪೇಜಾವರ ಶ್ರೀಗಳ ಮುಖ ಮೂಡಿ ಬಂದಿದೆ. ಇಲ್ಲಿವೆ ಚಂದದ ಫೋಟೋಸ್

ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ ನಡೆಯಿತು.
undefined
ಹೂಗಳಲ್ಲಿ ಮೂಡಿ ಬಂದ ಮುತ್ತಿಕ್ಕುತ್ತಿರುವ ಮೀನುಗಳು
undefined
ಕೆಂಪು ಹೂಗಳಲ್ಲಿ ಮೂಡಿ ಬಂದ ಪುಟ್ಟ ಅಕ್ಟೋಪಸ್
undefined
ಹೂಗಳಲ್ಲಿಯೇ ಮೂಡಿ ಬಂದ ಸುಂದರವಾದ ಕಲಾಕೃತಿ
undefined
ಕಲಾವಿದ ಭರತ್‌ ಅವರು ಕಲ್ಲಂಗಡಿ ಹಣ್ಣಿನಲ್ಲಿ ಪೇಜಾವರ ಶ್ರೀ, ಮೋದಿ, ವಿರಾಟ್‌ ಕೊಹ್ಲಿ, ಭಗತ್‌ ಸಿಂಗ್‌, ಶಿವಾಜಿ ಮುಂತಾದವರ ಮುಖಗಳನ್ನು ಕೆತ್ತಿದ್ದು ಅತಿಥಿಗಣ್ಯರ ಶ್ಲಾಘನೆಗೆ ಪಾತ್ರವಾಯಿತು.
undefined
ಪ್ರದರ್ಶನದ ಜೊತೆಗೆ ಇಲಾಖೆಯ ಮಾಹಿತಿ ನೀಡುವ ಮಳಿಗೆಗಳು, ಖಾಸಗಿ ನರ್ಸರಿಗಳಿಂದ ಹೂವಿನ ಮತ್ತು ಹಣ್ಣಿನ ಗಿಡಗಳ ಮಾರಾಟ ಮಳಿಗೆಯೂ ಜನರನ್ನು ಸೆಳೆಯುತ್ತಿವೆ
undefined
ಈ ಪ್ರದರ್ಶನದಲ್ಲಿ ಈ ಬಾರಿ ಜಲಚರಗಳಾದ ಕಪ್ಪುಚಿಪ್ಪು, ನಕ್ಷತ್ರ ಮೀನು, ಅಕ್ಟೋಪಸ್‌, ಸೀಹಾರ್ಸ್‌ ಇತ್ಯಾದಿಗಳನ್ನು ಹೂವುಗಳಿಂದ ರಚಿಸಿದ್ದು ವಿಶೇಷವಾಗಿದೆ
undefined
24 ಅಡಿ ಉದ್ದದ ಸುಮಾರು 30,000 ಹೂವುಗಳಿಂದ ಆಕರ್ಷಕವಾಗಿ ಹಡಗಿನ ಕಲಾಕೃತಿಯೊಂದನ್ನು ರಚಿಸಲಾಗಿದ್ದು, ನೋಡುಗರ ಗಮನ ಸೆಳೆಯಿತು.
undefined
click me!