ಇಲಾಖೆಯ ಮುನ್ಸೂಚನೆಯಂತೆ ಈಗಾಗಲೇ ಗುರುವಾರ ರಾತ್ರಿ ಎಂಟು ಗಂಟೆಯಿಂದ ತಡರಾತ್ರಿವರೆಗೂ ಭಾರೀ ಗುಡುಗು, ಸಿಡಿಲು ಸಹಿತ ಮಳೆ ಸುರಿಯಿತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲೂ ಗುಡುಗು ಸಿಡಿಲು ಸಹಿತ ಬಿಟ್ಟು ಬಿಡದೆ ಸುರಿಯಿತು. ಇದರಿಂದ ನರಕ ಚತುರ್ದಶಿಯ ದಿನವಾದ ಗುರುವಾರ ರಾತ್ರಿ ಪಟಾಕಿ ಸಿಡಿಸಿ ಹಬ್ಬ ಆಚರಿಸಲು ಸಿದ್ಧವಾಗಿದ್ದ ಜಿಲ್ಲೆಯ ಜನರಿಗೆ ಸಾಕಷ್ಟು ನಿರಾಶೆಯಾಯಿತು. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆಯಾಗಿರುವುದರಿಂದ ಹಬ್ಬಕ್ಕೆ ಪಟಾಕಿ ವ್ಯಾಪಾರದಲ್ಲೂ ತೀವ್ರ ನಷ್ಟ ಎದುರಾಗಿದೆ.