ಮಠಾಧೀಶರು ಅವರವರ ಸಿದ್ಧಾಂತವನ್ನು ಮಠಕ್ಕೆ ಸೀಮಿತಗೊಳಿಸಿ: ವಿಜಯಾನಂದ ಸ್ವಾಮೀಜಿ ಕರೆ

First Published Jul 13, 2021, 5:03 PM IST

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶಿಷ್ಯ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿಯವರು ಇಂದು (ಮಂಗಳವಾರ) ಉಡುಪಿ ಶ್ರೀಕೃಷ್ಣಕ್ಕೆ ಭೇಟಿ ನೀಡಿದರು. ಈ ವೇಳೆ ಮಠಾಧೀಶರು ಅವರವರ ಸಿದ್ಧಾಂತವನ್ನು ಮಠಕ್ಕೆ ಸೀಮಿತಗೊಳಿಸಿ ಎಂದು ಕರೆ ನೀಡಿದರು.

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶಿಷ್ಯ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿಯವರು ಇಂದು (ಮಂಗಳವಾರ) ಉಡುಪಿ ಶ್ರೀಕೃಷ್ಣಕ್ಕೆ ಭೇಟಿ ನೀಡಿದರು.
undefined
ಅವರನ್ನು ಮಠಕ್ಕೆ ವೇದಘೋಷ, ಮಂಗಳವಾದ್ಯದೊಂದಿಗೆ ಬರ ಮಾಡಿಕೊಳ್ಳಲಾಯಿತು. ನಂತರ ಅವರಿಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ದೇವರ ದರ್ಶನ ಮಾಡಿಸಿ ಗೌರವಿಸಿದರು.
undefined
ಮಂಗಳವಾರ ಉಡುಪಿ ಶ್ರೀಕೃಷ್ಣಕ್ಕೆ ಭೇಟಿಯ ಸಂದರ್ಭದಲ್ಲಿ ತಮಗೆ ಪರ್ಯಾಯ ಮಠದಿಂದ ನೀಡಲಾದ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
undefined
ಎಲ್ಲಾ ಮಠಾಧೀಶರು ಅವರವರ ಸಿದ್ಧಾಂತವನ್ನು ಮಠಕ್ಕೆ ಸೀಮಿತಗೊಳಿಸಿ ಸನಾತನ ಧರ್ಮದ ವಿಷಯ ಬಂದಾಗ ಎಲ್ಲರೂ ಒಂದಾಗಿ ಧರ್ಮವನ್ನು ಉಳಿಸುವ ಪ್ರಯತ್ನಿಸಬೇಕು ಎಂದರು.
undefined
ಪರ್ಯಾಯ ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿoತಾಯರು ಸ್ವಾಗತಿಸಿದರು.ಆಸ್ಥಾನ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಆಚಾರ್ಯರು ಕಾರ್ಯಕ್ರಮ ನಿರ್ವಹಿಸಿ ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್ ಧನ್ಯವಾದ ನೀಡಿದರು.
undefined
ಸಂಪರ್ಕಾಧಿಕಾರಿ ಶ್ರೀಶ ಕಡೆಕಾರ್ ಹಾಗೂ ಶ್ರೀಕೃಷ್ಣ ಸೇವಾ ಬಳಗದ ಸದಸ್ಯರು ಉಪಸ್ಥಿತರಿದ್ದರು.
undefined
click me!