ಲಾಕ್‌ಡೌನ್: ಬಡ ರಿಕ್ಷಾ ಚಾಲಕರಿಗೆ ಕಿಟ್ ವಿತರಿಸಿದ ಸಂಸದೆ

First Published Apr 18, 2020, 2:55 PM IST

ಚಿಕ್ಕಮಗಳೂರಿನ ಎನ್ಆರ್‌ ಪುರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಲಾಕ್‌ಡೌನ್‌ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಬಡ ರಿಕ್ಷಾ ಚಾಲಕರಿಗೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ.

ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದ ಆಟೋ ಡ್ರೈವರ್‌ಗಳಿಗೂ ವರಮಾನವಿಲ್ಲದೆ ಕಷ್ಟಪಡುವಂತಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ.
undefined
ಶನಿವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಆಟೋ ಚಾಲಕರಿಗೆ ಕಿಟ್ ವಿತರಿಸಿ ನೆರವಾಗಿದ್ದಾರೆ.
undefined
ಮಾಜಿ ಸಚಿವರಾದ ಡಿ.ಎನ್ ಜೀವರಾಜ್ ಹಾಗೂ ಸ್ಥಳಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಸಂಸದೆ ಫುಡ್ ಕಿಟ್ವಿತರಿಸಿದ್ದಾರೆ.
undefined
ಇತ್ತೀಚೆಗಷ್ಟೇ ಉಡುಪಿಯ ಕಾಪು ಭಾಗದಲ್ಲಿಯೂ ಸಂಸದೆ ಪಡಿತರ ಚೀಟಿ ಇಲ್ಲದ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದರು.
undefined
ಕಳೆದ ಕೆಲವು ದಿನಗಳ ಹಿಂದೆ ಸಂಸದೆ ಶೋಭಾ ಉಡುಪಿ- ಚಿಕ್ಕಮಗಳೂರು ಭಾಗವನ್ನು ನಿರ್ಲಕ್ಷ್ಯಿಸಿ ಬೆಂಗಳೂರಲ್ಲಿ ಕಿಟ್ ವಿತರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
undefined
click me!