ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಂಜುನಾಥ್
First Published Oct 24, 2021, 4:32 PM ISTಶಾಸಕರಾದ ಆರ್ ಮಂಜುನಾಥ್ ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಸಿದ್ದೇಶ್ವರ ಬಡಾವಣೆ ಮುಖ್ಯರಸ್ತೆಯ ಸಿ.ಸಿ ಡ್ರೈನ್ ಕಾಮಗಾರಿಗೆ ಚಾಲನೆ ನೀಡಿದರು. ಹಾಗೂ ಇದೇ ಸಂದರ್ಭದಲ್ಲಿ ಈ ಬಡಾವಣೆಯಲ್ಲಿ ಬಾಕಿ ಉಳಿದಿರುವ ಸ್ಯಾನಿಟರಿ ಪೈಪ್ ಲೈನ್ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಸ್ಥಳ ಪರಿವೀಕ್ಷಣೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮುದ್ದಹನುಮೇಗೌಡ, ಸಿತಾಮರಿಗೌಡ, ಎಸ್.ಆರ್.ಎಸ್ ಚಂದ್ರಣ್ಣ,ರಮೇಶ್, ಎಲೆಕ್ಟ್ರಿಕಲ್ ಜಗದೀಶ್, ಬಸವಣ್ಣ, ರಂಗಣ್ಣ, ರಾಣಿ ಪ್ರತಾಪ್, ಶಿವಣ್ಣ,ಸಿದ್ದೇಶ್ವರ ಬಡಾವಣೆ ನಿವಾಸಿಗಳ ಸಂಘದ ಸದಸ್ಯರು, ಪದಾಧಿಕಾರಿಗಳು, ನಿವಾಸಿಗಳು ಸ್ಥಳೀಯ ಮುಖಂಡರು ಹಾಜರಿದ್ದರು.