Published : May 11, 2020, 04:07 PM ISTUpdated : May 11, 2020, 04:15 PM IST
ಮುದ್ದೇಬಿಹಾಳ(ಮೇ.11): ಲಾಕ್ಡೌನ್ ಘೋಷಣೆಯಾಗಿದ ಮೇಲೆ ಗೋವಾ ರಾಜ್ಯದಲ್ಲಿ ಸಿಲುಕಿದ ತಮ್ಮ ಕ್ಷೇತ್ರದ ಕಾರ್ಮಿಕರ ರಕ್ಷಣೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಟೊಂಕ ಕಟ್ಟಿ ನಿಂತಿದ್ದಾರೆ. ಹೌದು, ಗೋವಾದಲ್ಲಿ ಸಿಲುಕಿದ್ದ 1590 ಜನ ಕಾರ್ಮಿಕರು ಕರೆತರುವ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ 350 ಕಾರ್ಮಿಕರನ್ನ 11 ಬಸ್ ಗಳ ಮೂಲಕ ಸ್ವತಃ ಶಾಸಕ ನಡಹಳ್ಳಿ ಅವರೇ ಕರೆತಂದಿದ್ದರು.