ನುಡಿದಂತ ನಡೆದ ಸಚಿವ ಸುಧಾಕರ್: ವಾರದಲ್ಲೇ ಭರವಸೆ ಈಡೇರಿತು..!

First Published May 6, 2020, 5:38 PM IST

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಏಪ್ರಿಲ್ 29ನೇ ತಾರೀಕಿನಂದು ಪರಿಶೀಲನಾ ಸಭೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಒಂದೇ ವಾರದಲ್ಲಿ ಈಡೇರಿಸಿದ್ದಾರೆ.
 

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
undefined
ಏಪ್ರಿಲ್ 29ನೇ ತಾರೀಕಿನಂದು ಮಂಡ್ಯ ಜಿಲ್ಲಾ ಪರಿಶೀಲನಾ ಸಭೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಒಂದೇ ವಾರದಲ್ಲಿ ಈಡೇರಿಸಿದ್ದಾರೆ.
undefined
ಏಪ್ರಿಲ್ 29 ನೇ ತಾರೀಕಿನಂದು ಮಂಡ್ಯ ಜಿಲ್ಲೆಯ ಪರಿಶೀಲನಾ ಸಭೆಯಲ್ಲಿ 1 ವಾರದೊಳಗೆ ಮಂಡ್ಯದಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಇಂದು ಮಂಡ್ಯದಲ್ಲಿ ಸುಸಜ್ಜಿತ ಪ್ರಯೋಗಾಲಯ ಸಿದ್ಧಗೊಂಡಿದೆ.
undefined
ಈ ಪ್ರಯೋಗಾಲಯ ಸ್ಥಾಪನೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆ ಅಲ್ಲೇ ನಡೆಯಲಿದ್ದು ತ್ವರಿತಗತಿಯಲ್ಲಿ ಚಿಕಿತ್ಸೆ ಆರಂಭಿಸಲು ಅನುವಾಗಲಿದೆ.
undefined
ಈ ಲ್ಯಾವ್‌ ಇಂದಿನಿಂದ (ಬುಧವಾರ)ಕಾರ್ಯಾರಂಭ ಮಾಡಲಿದೆ
undefined
ರಾಜ್ಯದಲ್ಲಿ ಈ ತಿಂಗಳ ಅಂತ್ಯದೊಳಗೆ 60 ಪ್ರಯೋಗಾಲಯ ಸ್ಥಾಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ.
undefined
ಇನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಸಹ ಇತ್ತೀಚೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಂಡ್ಯದಲ್ಲಿ ಕೋವಿಡ್ -19 ನಿಯಂತ್ರಣ ಮತ್ತು ಜಿಲ್ಲೆಗೆ ಮರಳುತ್ತಿರುವ ಕಾರ್ಮಿಕರು ಮತ್ತು ನಿವಾಸಿಗಳಿಗೆ ಸಮರ್ಪಕ ಸ್ಕ್ರೀನಿಂಗ್ ವ್ಯವಸ್ಥೆ ಮತ್ತು ಕ್ವಾರಂಟೈನ್ ಶಿಬಿರಗಳ ನಿರ್ಮಾಣ ಕುರಿತಂತೆ ಚರ್ಚೆ ನಡೆಸಿದ್ದರು.
undefined
click me!