ಲಾಕ್ಡೌನ್ ಎಫೆಕ್ಟ್: ನಾಡಿನತ್ತ ಮುಖ ಮಾಡಿದ ಪ್ರಾಣಿಗಳು, ವಾಹನಗಳ ಹಾರ್ನ್ಗೆ ಬೆದರಿ ಪ್ರಾಣ ಬಿಟ್ಟ ಕಾಡುಕೋಣ..!
First Published May 6, 2020, 9:01 AM ISTಮಂಗಳೂರು/ಮೂಲ್ಕಿ (ಮೇ.06): ಲಾಕ್ಡೌನ್ ಆಗಿದ್ದರಿಂದ ನಗರಗಳಲ್ಲಿ ಜನಸಂಚಾರ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಹೀಗೆಯೇ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕಾಡೆಮ್ಮೆ ಕೂಡ ಮಂಗಳವಾರ ಬೆಳಿಗ್ಗೆ ನಗರದ ಹೃದಯ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು. ಆದರೆ ಈ ಕಾಡುಕೋಣವನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಕಾಡಿಗೆ ಸೇರಿಸುವ ಹಂತದಲ್ಲಿ ಅದು ಮೃತಪಟ್ಟಿದೆ.