ಲಾಕ್‌ಡೌನ್‌ ಎಫೆಕ್ಟ್‌: ನಾಡಿನತ್ತ ಮುಖ ಮಾಡಿದ ಪ್ರಾಣಿಗಳು, ವಾಹನಗಳ ಹಾರ್ನ್‌ಗೆ ಬೆದರಿ ಪ್ರಾಣ ಬಿಟ್ಟ ಕಾಡುಕೋಣ..!

First Published May 6, 2020, 9:01 AM IST

ಮಂಗಳೂರು/ಮೂಲ್ಕಿ (ಮೇ.06): ಲಾಕ್‌ಡೌನ್‌ ಆಗಿದ್ದರಿಂದ ನಗರಗಳಲ್ಲಿ ಜನಸಂಚಾರ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಹೀಗೆಯೇ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕಾಡೆಮ್ಮೆ ಕೂಡ ಮಂಗಳವಾರ ಬೆಳಿಗ್ಗೆ ನಗರದ ಹೃದಯ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು. ಆದರೆ ಈ ಕಾಡುಕೋಣವನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಕಾಡಿಗೆ ಸೇರಿಸುವ ಹಂತದಲ್ಲಿ ಅದು ಮೃತಪಟ್ಟಿದೆ.

ನಗರದ ಕುಂಟಿಕಾನದ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಾಣಿಸಿಕೊಂಡ ಕಾಡುಕೋಣ
undefined
ವಾಹನಗಳ ಹಾರ್ನ್‌ಗೆ ಬೆದರಿ ಅಲ್ಲಿಂದ ಕಾಲ್ಕಿತ್ತ ಕಾಡುಕೋಣ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎರಡನೇ ಪ್ಲಾಟ್‌ಫಾರಂನಲ್ಲಿ ಪ್ರತ್ಯಕ್ಷ
undefined
ಬಸ್‌ ಸ್ಟ್ಯಾಂಡ್‌ನಲ್ಲಿದ್ದ ಕಾಡುಕೋಣವನ್ನ ಓಡಿಸಿದ ಜನ, ಬಿಜೈನಿಂದ ಹೊರಟು ಹ್ಯಾಟ್‌ಹಿಲ್, ಲಾಲ್‌ಬಾಗ್, ಬಳ್ಳಾಲ್‌ಬಾಗ್‌ಗೆ ಬಂದು ಬಳಿಕ ಅಳಕೆ ಕಡೆಗೆ ಸಂಚಾರ
undefined
ಅರಿವಳಿಕೆ ನೀಡಿ ಸಾಹಸದಿಂದ ಕಾಡುಕೋಣ ಸೆರೆಹಿಡಿದಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ
undefined
ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಚಾರ್ಮಾಡಿಯ ಅರಣ್ಯ ಪ್ರದೇಶಕ್ಕೆ ಬಿಡುವ ಪ್ರಯತ್ನ ಮಾಡಿದ್ದು, ಚಾರ್ಮಾಡಿಯಲ್ಲಿ ವಾಹನದಿಂದ ಇಳಿಸುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಕಾಡುಕೋಣ
undefined
click me!