ರಾಜ್ಕುಮಾರ್, ಅಂಬಿ, ವಿಷ್ಣುವರ್ಧನ್ ಹೆಸರಲ್ಲಿ ಪ್ರಾಣಿಗಳನ್ನು ದತ್ತು ಪಡೆದ ಸಚಿವ S T ಸೋಮಶೇಖರ್
First Published Jun 8, 2020, 1:59 PM ISTಮೈಸೂರು(ಜೂ.08): ಕನ್ನಡ ಚಿತ್ರರಂಗದ ಮೇರು ನಟರಾದ ವರನಟ ದಿ. ಡಾ.ರಾಜ್ ಕುಮಾರ್, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿ. ಅಂಬರೀಷ್ ಹಾಗೂ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದ್ರುವತಾರೆಯರಿಗೆ ಗೌರವ ಸೂಚಿಸಿದ್ದಾರೆ.