ಕೊರೋನಾಗೆ ಸಚಿವ ಜಾರಕಿಹೊಳಿ ಪರಮಾಪ್ತ ಬಲಿ: ಕುಚುಕು ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದ ಸಾಹುಕಾರ್
First Published Aug 9, 2020, 3:08 PM ISTಬೆಳಗಾವಿ(09): ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಪರಮಾಪ್ತರೊಬ್ಬರನ್ನ ಮಹಾಮಾರಿ ಕೊರೋನಾ ವೈರಸ್ ಬಲಿ ಪಡೆದಿದೆ. ಹೌದು, ಜಿಲ್ಲೆಯ ಗೋಕಾಕ್ ನಗರಸಭೆ ಸದಸ್ಯ ಜನಾಬ್ ಶೇಖ್ ಫತೇವುಲ್ಲಾ ಕೋತ್ವಾಲ್ ಅವರು ಡೆಡ್ಲಿ ಕೊರೋನಾ ವೈರಸ್ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ದಿನಗಳಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೋತ್ವಾಲ್ ಅವರು ಸಾವನ್ನಪ್ಪಿದ್ದಾರೆ.