ಅಂಜನಾದ್ರಿಯೇ ಹುನುಮ ಜನ್ಮಸ್ಥಳ ಎಂದು ಸರ್ಕಾರವೇ ಘೋಷಿಸುತ್ತೆ: ಸಚಿವ ಯೋಗೇಶ್ವರ

First Published Jul 1, 2021, 8:49 AM IST

ಹೊಸಪೇಟೆ(ಜು.01): ಧಾರ್ಮಿಕ ಹಿನ್ನೆಲೆ ಹೊಂದಿರುವ ಗಂಗಾವತಿಯ ಅಂಜನಾದ್ರಿಯೇ ಹನುಮನ ಜನುಮಸ್ಥಳ ಎಂದು ರಾಜ್ಯ ಸರ್ಕಾರದ ವತಿಯಿಂದಲೇ ಘೋಷಣೆ ಮಾಡಲಾಗುವುದು. ಜೊತೆಗೆ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ತಿಳಿಸಿದ್ದಾರೆ. 

ಬುಧವಾರ ಅಂಜನಾದ್ರಿಗೆ ಭೇಟಿ ನೀಡಿದ ಅವರು ತಿರುಪತಿಯೇ ಆಂಜನೇಯನ ಜನ್ಮಸ್ಥಳ ಎನ್ನುವ ವಾದವನ್ನು ಟೀಕಿಸಿದರು. ‘ಇಲ್ಲೊಂದು ತಿರುಪತಿ ದೇವಸ್ಥಾನ ಕಟ್ಟಿ ಇದೇ ತಿರುಪತಿ ಅಂದ್ರೆ ಒಪ್ಪೋಕೆ ಆಗುತ್ತದೆಯೇ’ ಎಂದು ಯೋಗೇಶ್ವರ್‌ ಪ್ರಶ್ನಿಸಿದರು.
undefined
ಅಂಜನಾದ್ರಿಗೆ ಇಂದು ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನು ವಿಶ್ವಮಟ್ಟದ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ವಿಶೇಷ ಯೋಜನೆ ರೂಪಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿಯ ಮಾಸ್ಟರ್‌ ಪ್ಲಾನ್‌ ಬೇಕಾಗುತ್ತದೆ. ಇದರ ಬಗ್ಗೆ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳೊಂದಿಗೆ ಸೇರಿ ಚರ್ಚೆ ಮಾಡುತ್ತೇವೆ. ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೆ ಇತರೆ ಎಲ್ಲ ಇಲಾಖೆಗಳು ಸೇರಿ ಈ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಮಾಡಬೇಕಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
undefined
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ
undefined
ಅಂಜನಾದ್ರಿ ಸೇರಿ ಸುತ್ತಮುತ್ತಲ ವಿವಿಧ ಐತಿಹಾಸಿಕ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕಿಷ್ಕಿಂದೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ ಎಂದು ಇದೇ ವೇಳೆ ಯೋಗೇಶ್ವರ ಹೇಳಿದರು.
undefined
click me!