ಇನ್ನು ಈ ಬಗ್ಗೆ ಚಿತ್ರದುರ್ಗ ಎಸ್ಪಿ ಧರ್ಮೇಂಧರ್ ಕುಮಾರ್ ಮೀನಾ ಅವರನ್ನು ಕೇಳಿದ್ರೆ, ಚಿತ್ರದುರ್ಗ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಆಟೋ ನಿಲ್ದಾಣ ಸೇರಿದಂತೆ ಸರ್ಕಲ್ ಗಳು ನಿರ್ಮಾಣ ವಾಗಬೇಕಿದೆ. ಅದ್ರಲ್ಲಂತೂ ನಮ್ಮ ನಗರದಲ್ಲಿ ಒಂದೇ ಪ್ರಮುಖ ರಸ್ತೆಯಿದೆ. ಅತಿ ಹೆಚ್ಚಾಗಿ ನಗರದ ಎಂ.ಜಿ ಸರ್ಕಲ್, ಸಂತೆಹೋಂಡ, KSRTC, ಖಾಸಗಿ ಸಾರಿಗೆ ಬಸ್ ನಿಲ್ದಾಣದ ಬಳಿ ಹೆಚ್ಚು ಟ್ರಾಫಿಕ್ ಕಿರಿಕಿರಿ ಆಗ್ತಿದೆ.