ಯಾಣದಲ್ಲಿ SSLC ವಿದ್ಯಾರ್ಥಿಗಳಿಗೆ ಆಪತ್ಭಾಂದವರಾದ KSRTC ಡ್ರೈವರ್, ಕಂಡಕ್ಟರ್

First Published Jul 3, 2020, 3:58 PM IST

ಕೊರೋನಾ ಭೀತಿಯ ನಡುವೆ ಕೊನೆಯ SSLC ಪರೀಕ್ಷೆ ಬರೆದು ಮನೆ ಸೇರಬೇಕು ಎಂದು ಬಸ್‌ನಲ್ಲಿ ಹೊರಟಿದ್ದ ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಗ್ಗೆಯೇ ಆಘಾತವೊಂದು ಎದುರಾಗಿತ್ತು. ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ಈ ಕ್ಷಣ ನೋಡಿ ವಿದ್ಯಾರ್ಥಿಗಳು ಕಂಗಾಲಾಗಿ ಹೋಗಿದ್ದಾರೆ.

ಒಂದು ಕಡೆ ಸಮಯ ಜಾರುತ್ತಿದೆ, ಮತ್ತೊಂದೆಡೆ ಬಸ್ ಮುಂದೆ ಹೋಗಲಾರದೇ ನಿಂತಿದೆ. ಈ ವೇಳೆ ಸಮಯ ವ್ಯರ್ಥ ಮಾಡದೇ KSRTC ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಸಾಕಷ್ಟು ಪ್ರಯಾಸಪಟ್ಟು ರಸ್ತೆ ತೆರವು ಮಾಡಿದ್ದಾರೆ. ಬಳಿಕ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ತವ್ಯ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಸಿಬ್ಬಂದಿಗೆ ಸುವರ್ಣ ನ್ಯೂಸ್.ಕಾಂ ವತಿಯಿಂದ ಬಿಗ್ ಸಲ್ಯೂಟ್.
 

ದಾರಿಯಲ್ಲಿ ಬಿದ್ದ ಮರ ತೆಗೆದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಸೆಂಟರ್‌ನತ್ತ ತಲುಪಿಸಿದ ಸಾರಿಗೆ ಸಿಬ್ಬಂದಿ
undefined
ರಸ್ತೆ ಮೇಲೆ ಮರ ಬಿದ್ದಿದ್ರೂ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಕೆಎಸ್‌ಆರ್‌ಟಿಸಿ ಡ್ರೈವರ್, ಕಂಡಕ್ಟರ್
undefined
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ರಸ್ತೆಯಲ್ಲಿ ನಡೆದ ಘಟನೆ
undefined
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ರಸ್ತೆಯಲ್ಲಿ ನಡೆದ ಘಟನೆ
undefined
ಗಾಳಿ ಮಳೆಗೆ ರಸ್ತೆ ಮೇಲೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರ. ಮರವನ್ನು ಪ್ರಯಾಸಪಟ್ಟು ತೆರವುಗೊಳಿಸಿದ ಚಾಲಕ, ನಿರ್ವಾಹಕ
undefined
ಅಡ್ಡಿಯ ನಡುವೆಯೂ ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಂಡ ಸಿಬ್ಬಂದಿ
undefined
ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ರವಾನಿಸಿ ಬೇಷ್ ಎನಿಸಿಕೊಂಡ ಡ್ರೈವರ್, ಕಂಡಕ್ಟರ್
undefined
click me!