ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡಿದ IAS ಅಧಿಕಾರಿ..!
First Published May 4, 2020, 3:15 PM ISTಬೀದರ್(ಮೇ. 04): ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡುವ ಮೂಲಕ ಐಎಎಸ್ ಅಧಿಕಾರಿಯೊಬ್ಬರು ಕೂಲಿ ಕೆಲಸದ ಕಾಯಕಕ್ಕೆ ಮತ್ತಷ್ಟು ಪ್ರೇರಣೆಯಾದ ಘಟನೆ ಔರಾದ್ ತಾಲೂಕಿನಲ್ಲಿ ನಡೆದಿದೆ. ಐಎಎಸ್ ಅಧಿಕಾರಿ ಗಂಗವಾರ್ ಅವರು ಸಣ್ಣ ನೀರಾವರಿಯ ಟ್ಯಾಂಕ್ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಕೂಲಿ ಕಾರ್ಮಿಕರ ಕೈಯಲ್ಲಿದ್ದ ಸಲಿಕೆ ಪಡೆದು ತಾವೂ ಗುಂಡಿ ತೋಡುವ ಕಾರ್ಯಕ್ಕೆ ಮುಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.