ಉತ್ತರಹಳ್ಳಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ದೇವರನ್ನು ನಂಬಿದ್ದೇನೆ. ದೇವರೊಬ್ಬ, ನಾಮ ಹಲವು ಎಂದುಕೊಂಡಿದ್ದೇನೆ. ಹೀಗಾಗಿ, ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ. ಇದಕ್ಕಾಗಿಯೇ ಬಸವಾದಿ ಶರಣರು ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದು ಹೇಳಿದ್ದಾರೆ. ದೇವರು ನಮ್ಮನ್ನು ನಿತ್ಯ ನೋಡುತ್ತಿದ್ದಾನೆ. ದೇವರ ಅನುಗ್ರಹ ಪಡೆದುಕೊಳ್ಳುವುದಕೆ ದೇವಸ್ಥಾನಕ್ಕೆ ಹೋಗಕಿಲ್ಲ. ದೇವಸ್ಥಾನಕ್ಕೆ ಹೋದವರೆಲ್ಲ ಆಸ್ತಿಕರಲ್ಲ, ದೇವಸ್ಥಾನಕ್ಕೆ ಹೋಗಲಿಲ್ಲ ಎಂದ ಮಾತ್ರಕ್ಕೆ ನಾಸ್ತಿಕರೂ ಅಲ್ಲ. ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಿದರೆ ಸಾಕು ದೇವರು ಮೆಚ್ಚುತ್ತಾನೆ ಎಂದಿದ್ದಾರೆ ಎಂದರು.
ಉತ್ತರಹಳ್ಳಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ದೇವರನ್ನು ನಂಬಿದ್ದೇನೆ. ದೇವರೊಬ್ಬ, ನಾಮ ಹಲವು ಎಂದುಕೊಂಡಿದ್ದೇನೆ. ಹೀಗಾಗಿ, ದೇವರು ಎಲ್ಲರಲ್ಲೂ ಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ. ಇದಕ್ಕಾಗಿಯೇ ಬಸವಾದಿ ಶರಣರು ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದು ಹೇಳಿದ್ದಾರೆ. ದೇವರು ನಮ್ಮನ್ನು ನಿತ್ಯ ನೋಡುತ್ತಿದ್ದಾನೆ. ದೇವರ ಅನುಗ್ರಹ ಪಡೆದುಕೊಳ್ಳುವುದಕೆ ದೇವಸ್ಥಾನಕ್ಕೆ ಹೋಗಕಿಲ್ಲ. ದೇವಸ್ಥಾನಕ್ಕೆ ಹೋದವರೆಲ್ಲ ಆಸ್ತಿಕರಲ್ಲ, ದೇವಸ್ಥಾನಕ್ಕೆ ಹೋಗಲಿಲ್ಲ ಎಂದ ಮಾತ್ರಕ್ಕೆ ನಾಸ್ತಿಕರೂ ಅಲ್ಲ. ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಿದರೆ ಸಾಕು ದೇವರು ಮೆಚ್ಚುತ್ತಾನೆ ಎಂದಿದ್ದಾರೆ ಎಂದರು.